ಸುದ್ದಿಗಳು

“ಗೌರಿ ಗಣೇಶ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ”

ಹಾವೇರಿ: ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಜಿಲ್ಲಾ ಘಟಕ ಹಾವೇರಿ ಹಾಗೂ ಭಾರತ್ ಸ್ಕೌಟ್ ಗೈಡ್ ಸಂಸ್ಥೆ ಹಾನಗಲ್ಲ ಸಹಯೋಗದಲ್ಲಿ ಸೆಪ್ಟೆಂಬರ್ ೮ ರಂದು ಗೂಗಲ್ ಮೀಟ್ ಮೂಲಕ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿದ್ದು ಪ್ರೊ ಮಾರುತಿ ಶಿಡ್ಲಾಪೂರ ಉದ್ಘಾಟಿಸಲಿದ್ದಾರೆ.ಸೃಜನಶೀಲ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷರಾದ ಸಂತೋಷ್ ಬಿದರಗಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ್...

ಮನುಷ್ಯನ ಉತ್ತಮ ಬದುಕಿಗೆ ಬಣ್ಣ ತುಂಬುವ ಶಕ್ತಿಯನ್ನು ಶಿಕ್ಷಕ ಹೊಂದಿದ್ದಾನೆ – ಶ್ರೀ.ಮ.ನಿ.ಪ್ರ.ಪ್ರಭುನೀಲಕಂಠ ಸ್ವಾಮೀಜಿ

ಸವದತ್ತಿ: “ಅಲೆಗ್ಜಾಂಡರ್ ಜಗತ್ತನ್ನು ಗೆದ್ದು ತನ್ನ ತಾಯ್ನಾಡಿಗೆ ಬಂದಾಗ ಮೆರವಣಿಗೆ ಸಾಗಿರುವುದು.ಮೆರವಣಿಗೆ ಸಂದರ್ಭದಲ್ಲಿ ವಯಸ್ಸಾದ ಕಡು ಬಡತನದ ವ್ಯಕ್ತಿಯೊಬ್ಬ ಜನಸಂದಣಿಯಲ್ಲಿ ನಿಂತಿರುವನು.ಅಲೆಗ್ಜಾಂಡರ ತನ್ನ ರಥದಲ್ಲಿ ದೂರದಿಂದಲೇ ಅವನನ್ನು ನೋಡುತ್ತಾನೆ ತಕ್ಷಣ ರಥವನ್ನು ನಿಲ್ಲಿಸಿ ಜನರ ಮಧ್ಯದಲ್ಲಿ ನಿಂತಿದ್ದ ಆ ವ್ಯಕ್ತಿಯ ಕಾಲಿಗೆ ಬಂದು ನಮಸ್ಕರಿಸುತ್ತಾನೆ. ಸೈನಿಕರಿಗೆ ಆಶ್ಚರ್ಯ ಯಾರಿವರು.? ಎಂದು ಪ್ರಶ್ನಿಸಿಕೊಂಡಾಗ ನನ್ನ ಗುರು...

ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ

ಸವದತ್ತಿ: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಡಯಟ್ ಉಪನ್ಯಾಸಕರಾದ ಪ್ರಕಾಶ ಪಾಟೀಲ ನೇತೃತ್ವದಲ್ಲಿ ಜರುಗಿಸಲಾಯಿತು. ಈ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ.ಪ್ರಥಮ ದರ್ಜೆ ಸಹಾಯಕರಾದ ಗಿರೀಶ ಮುನವಳ್ಳಿ. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ. ಡಾ.ಬಿ.ಐ.ಚಿನಗುಡಿ. ವ್ಹಿ.ಸಿ.ಹಿರೇಮಠ. ಬಿ.ಐ.ಇ.ಆರ್.ಟಿ...

ಸರ್ಕಾರದ ಮಾರ್ಗಸೂಚಿಯಂತೆ ಗಣೇಶ ಹಬ್ಬ ಆಚರಣೆ ಕಡ್ಡಾಯ – ಪಿಎಸ್ಐ ಬಾಲದಂಡಿ

ಮೂಡಲಗಿ - ಕೊರೋನಾ ಕಾರಣದಿಂದಾಗಿ ಈ ವರ್ಷ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ದೇಶನ ನೀಡಿದ್ದು ನಾವೆಲ್ಲರೂ ಸರ್ಕಾರದ ಆದೇಶದಂತೆ ನಡೆಯುವುದು ಅನಿವಾರ್ಯ. ಆದ್ದರಿಂದ ಸರಳವಾಗಿ ಗಣೇಶ ಹಬ್ಬ ಆಚರಿಸೋಣ ಎಂದು ಪಿಎಸ್ ಐ ಹಾಲಪ್ಪ ಬಾಲದಂಡಿ ಹೇಳಿದರು.ನಗರದ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಗಣೇಶ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಗಣೇಶ ಹಬ್ಬವನ್ನು...

ಸ್ನೇಹಜೀವಿ ಬಳಗದ ಸುಧೀರ ವಾಘೇರಿಯವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕಾರ

ಮುನವಳ್ಳಿ- ಸ್ಥಳೀಯ ಸ್ನೇಹಜೀವಿ ಬಳಗದ ರೂವಾರಿ ಹಾಗೂ ಸವದತ್ತಿ ತಾಲೂಕಿನ ಚಿಕ್ಕುಂಬಿಯ ಸರಕಾರಿ ಪ್ರೌಢಶಾಲಾ ಇಂಗ್ಲೀಷ ಶಿಕ್ಷಕ ಸುಧೀರ ವಾಘೇರಿಯವರಿಗೆ ಸೆಪ್ಟಂಬರ್ 5 ರಂದು ಬೆಳಗಾವಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸಿಯನ್ನು ಉಪನಿರ್ದೇಶಕರಾದ ಡಾ.ಎ.ಬಿ.ಪುಂಡಲೀಕ,ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ...

ಗ್ರಾಮೀಣ ಭಾಗದ ಯುವ ಕ್ರೀಡಾ ಪ್ರತಿಭೆ ಸೂರ್ಯಕಾಂತ ಮೆಣಸಿನಕಾಯಿ; ಸಾಧನೆಯ ಸಾಧಕನಿಗೊಂದು ಸಲಾಂ

ಮೂಡಲಗಿ - ಇತ್ತೀಚೆಗೆ ನಡೆದ ಜಪಾನ್ ಒಲಿಂಪಿಕ್ ಕ್ರೀಡಾಕೂಟದ ಕ್ರೀಡಾ ಪಟುಗಳನ್ನು ಕರೆಯಿಸಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪ್ರೋತ್ಸಾಹಿಸಿದ ಫಲವಾಗಿ ಇವತ್ತು ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಪದಕಗಳ ಸುರಿಮಳೆ ಯಾಗುತ್ತಿದೆ. ಆದ್ದರಿಂದ ಸಾಧನೆಯ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸ್ಥಳೀಯ ಕರುನಾಡು ಪೊಲೀಸ್ ಹಾಗೂ ಸೈನಿಕರ ತರಬೇತಿ...

ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಿರಿ: ಎಚ್.ಆರ್.ಪೆಟ್ಲೂರ

ಮುನವಳ್ಳಿ: ನಮ್ಮ ಅಧ್ಯಯನದಲ್ಲಿ ಯಾವುದೇ ವಿಷಯವಿರಲಿ ಅದು ಕಠಿಣವಿರುವುದಿಲ್ಲ.‌ ಕಾರಣಅದನ್ನು ನಾವು ಕಷ್ಟಪಟ್ಟು ಓದುವ ಪ್ರಯತ್ನ ಮಾಡಿದಾಗ ಅದು ಕಠಿಣವೆನಿಸುತ್ತದೆ. ಅದೇ ವಿಷಯವನ್ನು ಇಷ್ಟಪಟ್ಟು‌ಓದಲು ತೊಡಗಿದಾಗ ನಮಗದು ಕಷ್ಟವೆನಿಸದು. ಇದರೊಂದಿಗೆ ನೀವು ಏ‌ನಾಗಬೇಕು ಎಂದು ಬಯಸುವಿರೋ ಅದರತ್ತ ನಿಮ್ಮ ಗಮನವಿರಿಸಿ ಅಭ್ಯಾಸ ಮಾಡಿ.ಅಂದರೆ ನಿಶ್ಚಿತ ಗುರಿಯನ್ನು ಮುಟ್ಟುವಿರಿ ಎಂದು ಸವದತ್ತಿ ತಾಲೂಕಿನ‌ ಪ್ರಾಥಮಿಕ ಶಾಲಾ...

6-7 ನೇ ತರಗತಿ ಶಾಲಾರಂಭ; ಶಿಕ್ಷಕ ವರ್ಗ, ಮಕ್ಕಳಲ್ಲಿ ಹರ್ಷದ ಛಾಯೆ – ಪತ್ರಕರ್ತ ಮಲ್ಲು

ಮೂಡಲಗಿ: ಮೂರನೇ ಅಲೆಯ ಆತಂಕದ ನಡುವೆ ಕಳೆದ ಎರಡು ವರ್ಷದಿಂದ ಸ್ಥಗಿತಕೊಂಡಿರುವ ಪ್ರಾಥಮಿಕ ಶಾಲೆಗಳು ಕ್ರಮೇಣವಾಗಿ ಪ್ರಾರಂಭವಾಗುತ್ತಿದ್ದು, ಶಿಕ್ಷಕರಿಗೆ, ಮಕ್ಕಳಿಗೆ ಹಾಗೂ ಪಾಲಕರ ಮುಖದಲ್ಲಿ ಸಂತಸದ ಛಾಯೆ ಮೂಡಿದೆ ಎಂದು ಪತ್ರಕರ್ತ ಮಲ್ಲು ಬೋಳನವರ ಹೇಳಿದರು.ಸೋಮವಾರದಂದು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ 6ರಿಂದ 7ನೇ ತರಗತಿಯ ಶಾಲಾ ಮಕ್ಕಳನ್ನು ಶಾಲೆಗೆ...

ಜಾನುವಾರುಗಳನ್ನು ಕಂದು ರೋಗದಿಂದ ಮುಕ್ತಗೊಳಿಸಬೇಕು- ಡಾ. ಎಂ.ಬಿ. ವಿಭೂತಿ ಸಲಹೆ

ಮೂಡಲಗಿ: ‘ರೈತರು ಕರುಗಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಕಂದು ರೋಗದಿಂದ ಮುಕ್ತಗೊಳಿಸಬೇಕು’ ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಂ.ಬಿ. ವಿಭೂತಿ ಹೇಳಿದರು.ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆ ಅಡಿಯಲ್ಲಿ ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಪಶು ಆಸ್ಪತ್ರೆಯಲ್ಲಿ ಸೋಮವಾರ ಕಂದು ರೋಗದ...

ರಾಜ್ಯಪಾಲ ಗೆಹ್ಲೋಟ್‍ರನ್ನು ಅಭಿನಂದಿಸಿದ: ಸಂಸದ ಈರಣ್ಣ ಕಡಾಡಿ

ಮೂಡಲಗಿ: ರಾಜ್ಯದ ಜನ ಸಾಮಾನ್ಯರಿಗೆ ಸಂಬಂಧಿಸಿದ ಏನೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ ನಾನು ಆ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸೂಚಿಸುತ್ತೇನೆ ಎಂದು ರಾಜ್ಯಪಾಲ ಡಾ. ತಾವರಚಂದ ಗೆಹ್ಲೋಟ್ ಭರವಸೆ ನೀಡಿದರು.ಸೋಮವಾರ ಬೆಂಗಳೂರಿನ ರಾಜಭವನದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ರಾಜ್ಯಪಾಲರನ್ನು ಸೌಹಾರ್ದಯುತ ಭೇಟಿಯಾಗಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group