ಸುದ್ದಿಗಳು

ಆ.20 ರಂದು ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟನೆ

ಮೂಡಲಗಿ: ತಾಲೂಕಿನ ಹಳೇಯರಗುದ್ರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಾ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಹಾಗೂ ಶ್ರೀ ಬಿಂದಿಗೆಮ್ಮಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಳೇಯರಗುದ್ರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಮತ್ತು ಶ್ರೀ ವೇಮನ್ ಸೇವಾ ಸಮಿತಿ ಆಶ್ರಯದಲ್ಲಿ ಆ.19 ಮತ್ತು 20...

ಪಂಚಮಸಾಲಿ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನಿಂಗಪ್ಪ ಪಿರೋಜಿ

ಮೂಡಲಗಿ: ಸ್ಥಳೀಯ ಮುಖಂಡ ಹಾಗೂ ರಾಜಕೀಯ ಧುರೀಣರಾದ ನಿಂಗಪ್ಪ ಫಿರೋಜಿಯವರನ್ನು ಬೆಳಗಾವಿ ಜಿಲ್ಲಾ ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಹುಬ್ಬಳ್ಳಿಯಲ್ಲಿ ಜರುಗಿದ ಕಾರ್ಯಕಾರಿಣಿ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು, ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ನೇಮಕಗೊಳಿಸಿ ಸಂಘಟನೆಯಲ್ಲಿ ಸಕ್ರಿಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸೂಚಿಸಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಸಾಧನೆಯ ಜೊತೆ ಇನ್ನೂ ಹೆಚ್ಚಿನದನ್ನು ಸಾಧಿಸಬೇಕು – ಅರುಣ ಶಹಾಪುರ

ಸಿಂದಗಿ: ಪರೀಕ್ಷೆಯಲ್ಲಿ ಸಾಧಿಸಿರುವದು ಸಾಕಷ್ಟಿದ್ದರೂ ಕೂಡ ಮುಂದಿನ ನಿಮ್ಮ ಶೈಕ್ಷಣಿಕ ಜೀವನದಲ್ಲಿ ಸಾಧಿಸಬೇಕಾಗಿರುವದು ಬಹಳಷ್ಟಿದೆ.ಹೀಗಾಗಿ ಉತ್ತರೋತ್ತರವಾಗಿ ನೀವು ಹೆಚ್ಚಿನದನ್ನು ಸಾಧಿಸಿರಿ,ನಾಡಿಗೆ ವಿನೂತನ ರೀತಿಯ ಕೊಡುಗೆ ನಿಮ್ಮಿಂದ ಮೂಡಿಬಂದು ಶೈಕ್ಷಣಿಕ ಕ್ಷೇತ್ರದ ಹೆಮ್ಮರವಾಗಿ ಈ ನಾಡು ರೂಪುಗೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅವರು ಹೇಳಿದರು.ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ...

ಕವನ: ಸ್ವಾತಂತ್ರ್ಯ

ಸ್ವಾತಂತ್ರ್ಯ ಯಾರಿಗಿದೆ?ಎಲ್ಲಿದೆ? ಸ್ವಾತಂತ್ರ್ಯ ಇರುವುದೆಲ್ಲವೂ ನಮಗೆ ಪಾರತಂತ್ರ್ಯ ಬದುಕು ಕಟ್ಟಬೇಕು ನಾವು ನಮ್ಮಗಳ ಮೇಲೆ ಸ್ವಾತಂತ್ರ್ಯದ ವಿಜಯದ ಮೇಲೆ ಸ್ವಾತಂತ್ರ್ಯವಿರುವುದು ಪೋಲಿಸರ ಗುಂಡು ಲಾಠಿಗಳಲಿ ವಂಚಕರ ಕೈಗಳಲಿ ಬಡವನ ಕಣ್ಣೀರು ಒರೆಸದ ಸಾಲದ ಶೂಲದಲಿ ಹರಿದ ತಿನ್ನುವ ಮೃಗಗಳಲಿ ರೈತನ ಶರಣಾಗತಿಯ ನೇಣು ಹಗ್ಗದಲಿ ಬಿಗಿದ ಕುತ್ತಿಗೆಯಲಿ ಸ್ವಾತಂತ್ರ್ಯ ಬಂತು ನಿತ್ಯ ನಿರಂತರ ಗುಂಡಿಗೆ ಎದೆಯೊಡ್ಡುವ ವೀರ ಯೋಧರ ಕಫನಿನಲಿ ಬಂತು ಸ್ವಾತಂತ್ರ್ಯ ತುಂಡುಡುಗೆಯನುಟ್ಟು ಕಂಡ ಕಂಡವರ ದಾಹಕ್ಕೆ ಆಸರೆಯಾಗಿ ನೀರೆರೆಯುವ ರಕ್ತ ದೇಹಿಗಳ ಕಾಮುಕರ...

ಗೃಹ ನಿರ್ಮಾಣ ಅನುದಾನ ಹೆಚ್ಚಿಸಿದ ಸಚಿವರಿಗೆ ಅಭಿನಂದನೆ – ಮಂಜುನಾಥ ದೊಡಮನಿ

ಸಿಂದಗಿ: ಪರಿಶಿಷ್ಟ ಜಾತಿಯ ಜನರಿಗೆ ಗೃಹ ನಿರ್ಮಾಣದ ಅನುದಾನವನ್ನು ೧.೭೦ ಲಕ್ಷದಿಂದ ೫. ಲಕ್ಷದವರೆಗೂ ಹೆಚ್ಚಿಗೆ ಮಾಡಿರುವ ನೂತನ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಉಪಾಧ್ಯಕ್ಷ ಮಂಜುನಾಥ ದೊಡಮನಿ ಅಭಿನಂದಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ...

ಎದೆ ಮಟ್ಟ ನೀರಲ್ಲಿಯೇ ನಿಂತು ಧ್ವಜ ಹಾರಿಸಿದರು !

ಭಾಗಲ್ ಪುರ (ಬಿಹಾರ ) - ದೇಶದೆಲ್ಲೆಡೆ ೭೫ ನೇ ಸ್ವಾತಂತ್ರ್ಯ ಸಂಭ್ರಮವಿದೆ. ಆದರೆ ಒಂದು ಕಡೆ ಕೊರೋನಾ ಮಹಾಮಾರಿ ಕಾಡುತ್ತಿದ್ದರೆ ಇನ್ನೊಂದು ಇತ್ತೀಚೆಗೆ ಸುರಿದ ಭಾರೀ ಮಳೆ, ಮಹಾಪೂರದ ಕಾಟ. ಇಂಥ ಸಂಕಟದಲ್ಲೂ ದೇಶದ ಯುವಕರು ಪ್ರವಾಹದಿಂದ ಉಂಟಾದ ಎದೆ ಮಟ್ಟ ನೀರಲ್ಲಿಯೇ ನಿಂತು ಧ್ವಜಾರೋಹಣ ಮಾಡಿದ ವೀಡಿಯೋ ಒಂದು ವೈರಲ್ ಆಗಿದೆ.ಈ...

ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

"ನಮ್ಮ ಬದುಕಿನಿಂದ ಇನ್ನೊಬ್ಬರ ಬದುಕು ಬದಲಾಗುವಂತೆ ಬದುಕಬೇಕು": ಸಾಹಿತಿ ಸುನಂದಾ ಎಮ್ಮಿ ಅಭಿಮತ. ಸೋಮವಾರ ದಿ. 16 ರಂದು ಬೆಳಗಾವಿಯ ಕಾರಂಜಿ ಮಠದಲ್ಲಿ' ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ' ಮತ್ತು ಕಾರಂಜಿಮಠ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಲಿಂ. ಉಳವೀಶ ಹುಲೆಪ್ಪನವರಮಠ ಸ್ಮರಣಾರ್ಥ 'ದತ್ತಿನಿಧಿ ಕಾರ್ಯಕ್ರಮ' ನಡೆಯಿತು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಸುನಂದಾ ಎಮ್ಮಿ...

ಬಿಜೆಪಿ ಯುವ ಮೋರ್ಚಾದಿಂದ ಯುವ ಸಂಕಲ್ಪ ಯಾತ್ರೆ, ಸೈಕಲ್ ಜಾಥಾ

ಮೂಡಲಗಿ: 75 ನೇ ಸ್ವಾತಂತ್ರ್ಯೋತ್ಸ ದಿನದ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಅರಭಾವಿ ಮಂಡಲ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ ನೇತೃತ್ವದಲ್ಲಿ ‘ಯುವ ಸಂಕಲ್ಪ ಯಾತ್ರೆ’ಯ ಸೈಕಲ್ ಜಾಥಾದಲ್ಲಿ ವಿವಿಧ ಮೋರ್ಚಾಗಳ ಕಾರ್ಯಕರ್ತರು ಸಂಗನಕೇರಿಯಿಂದ ಮೂಡಲಗಿಯ ಕಲ್ಮೇಶ್ವರ ವೃತ್ತದವರೆಗೆ ಸೈಕಲ್ ಜಾಥಾ ನಡೆಸಿದರು.ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ರಾಜ್ಯ ಸಭಾ ಸದಸ್ಯ ಈರಣ್ಣ...

ಜಲ ಜೀವನ ಮಿಶನ್ ಪೈಪ್ ಲೈನ್ ಕಾಮಗಾರಿಗೆ ಚಾಲನೆ

ಸಿಂದಗಿ: ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಶನ್ ಯೋಜನೆಯಡಿ ಗ್ರಾಮದ ಪ್ರತಿಯೊಂದೂ ' ಮನೆ ಮನೆಗೆ ನೀರು ' ಅನ್ನುವ ನಳ ಅಳವಡಿಸುವ ಪೈಪಲೈನ ಕಾಮಗಾರಿಗೆ ಸಂಸದ ರಮೇಶ ಜಿಗಜಿಣಗಿ ಅವರು ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ,...

ಸುಂದರ ಪರಿಸರ ನಿರ್ಮಾಣದಲ್ಲಿ ಯುವಕರು ಹೆಚ್ಚು ಭಾಗಿಯಾಗಬೇಕು – ತೋಂಟದಾರ್ಯ ಶ್ರೀಗಳು

ಸಿಂದಗಿ: ಪ್ರಕೃತಿ ನಮಗೆ ಉಚಿತವಾಗಿ ಕೊಡುಗೆ ನೀಡಿದ ನೀರು, ಗಾಳಿ, ಬೆಳಕನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ಬಂದೊದಗಿದ್ದು ದುರಂತವೇ ಸರಿ. ಔದ್ಯೋಗಿಕ ಕ್ರಾಂತಿಯಿಂದಾಗಿ ಜಲಮೂಲ, ನದಿಮೂಲಗಳು ಮಲೀನಗೊಂಡು, ನಗರೀಕರಣದ ಭರಾಟೆಯಿಂದ ಕಾಡು, ಮೇಡು, ಗಿಡ-ಮರಗಳು ನಾಶವಾಗಿ ವಾಯುಮಾಲಿನ್ಯ ಉಂಟಾಗುತ್ತಿದೆ. ವನ್ಯ ಜೀವಿಗಳು ಆಶ್ರಯ ತಾಣವಿಲ್ಲದೇ ನಾಡಿಗೆ ದಾಂಗುಡಿಯಿಡುತ್ತಿವೆ. ಎಂದು ಗದುಗಿನ ತೋಂಟದಾರ್ಯ ಮಠದ ಶ್ರೀ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group