ಸುದ್ದಿಗಳು

ವಿಶ್ವ ಆಹಾರ ದಿನದ ಶುಭಾಶಯಗಳು

ಅನ್ನ ಬಿಟ್ಟೆ ನೀ ಸತ್ತೆ ತುತ್ತು ಅನ್ನ ಬೊಗಸೇ ನೀರು ಕೊಟ್ಟ ಮಾಡಿದ ಫಲದಿಂದ ಕಷ್ಟ ನಷ್ಟ ದಲ್ಲೋ ಅನ್ನವನ್ನು ಇತ್ತ ಆ ಪರಬ್ರಹ್ಮ ಮಾಡಿದ ಕರ್ಮಾನುಸಾರ ಪಡೆಯುವುದು ಅನ್ನದ ಬಂಧ ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||ಸಕಲ ಜೀವ ರಾಶಿ ಗಳ ಮೇಲೆ ಅವನ ಕಣ್ಣು ಮನಸಿನನುಸಾರ ಸ್ವರ್ಗ-ನರಕ ಬಳಿಯುವನು ಬಣ್ಣ ಅನ್ನ ಎಲ್ಲಾ ಪೀಳಿಗೆಗೂ ಬೇಕು ಕಾಯ್ದುಕೋ ಅಣ್ಣ ಹಾಯಾಗಿರೋಕೆ,ಮತ್ತೇನು ಬೇಕು...

ಕರೋನಾ ಕವಿತೆಗಳು- ಕವನಗಳ ಆಹ್ವಾನ

ಬೆಳಗಾವಿ -ಹೊಂಬೆಳಕು ಸಾಂಸ್ಕೃತಿಕ ಸಂಘ ರಾಮತೀರ್ಥ ನಗರ ಬೆಳಗಾವಿಯಿಂದ ಕೊರೋನಾ ಮಹಾಮಾರಿ ಕುರಿತಾದ ಜಿಲ್ಲಾ ಮಟ್ಟದ ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಿದ್ದು, ಬೆಳಗಾವಿ ಜಿಲ್ಲೆಯ ಕವಿಗಳು ಕೊರೋನಾ ಕುರಿತಾದ ತಮ್ಮ ಎರಡು ಕವನಗಳನ್ನು ದಿನಾಂಕ: 30-10-2020 ರ ಒಳಗಾಗಿ ಬಸವರಾಜ ಗಾರ್ಗಿ, ಹೊಂಗನಸು, ಪ್ಲಾಟ್ ನಂ. 73, ರಾಣಿ ಚನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ,...

ಕವನ: ಅನ್ನದಾತ ಅಯ್ಯೋ ಪಾಪ!

ಹೊಲವ ಉಳುವ ರೈತ ಪಾಪ ಹಲುಬುವಂತೆ ಆಗಿದೆ !! ತನ್ನ ಕುಣಿಯ ತಾನೇ ತೋಡಿ ಕೂರೋ ಹಾಗೆ ಮಾಡಿದೆ!! ಎಲ್ಲ ಜನರ ಹೊಟ್ಟೆ ತುಂಬ್ಸೋ ಅನ್ನದಾತ ಪ್ರಭು ಇಂವ ಇವನ ಮನೆಯೆ ಹೊಟ್ಟೆ-ಬಟ್ಟೆ ಕೊರತೆಯಿಂದ ಕೊರಗಿದೆ!! ಮಂಜೇ ಇರಲಿ,ಮಳೆಯೆ ಬರಲಿ ಸಂಜೆವರೆಗೂ ದುಡಿಯುವ ಗುಟುಕು ಗಂಜಿಗಾಗಿ ಅಂಜಿ ಜೀವಮಾನ ಸವೆಸುವ!! ಬಿಸಿಲ ಧಗೆಯ ಬೆವರ ಜಳಕ ಶ್ರಮಕೆ ಇಲ್ಲ ಸಾರ್ಥಕ ಶ್ರಮವ ಪಡದೆ ಬೇರೆ ಜನರು ಮೆರೆಯುತಿಹರು ಸ್ವಾರ್ಥವ!! ದೇಶದ ಬೆನ್ನೆಲುಬು ಎಂದು ನುಡಿಯುತಿಹರೆ ಸುಮ್ಮನೆ ಹೊಗಳಿಕೆಯ ಭಾಷಣವ ಬಿಗಿದು ಕಟ್ಟಿ...

ಇಂದು ಜಾಗತಿಕ ವಲಸೆ ಹಕ್ಕಿಗಳ ದಿನ

ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 1993 ರಲ್ಲಿ ಅಮೆರಿಕದ ಸ್ಮಿತ್ ಸೋನಿಯನ್ ವಲಸೆ ಪಕ್ಷಿಗಳ ಕೇಂದ್ರ 'ಜಾಗತಿಕ ವಲಸೆ ಹಕ್ಕಿಗಳ ದಿನ' ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ನಂತರದ ವರ್ಷಗಳಲ್ಲಿ ಮತ್ತಷ್ಟು ದೇಶಗಳ ಸಂಘಸಂಸ್ಥೆಗಳು ಕೈ ಜೋಡಿಸಿ ಗಮನಸೆಳೆದ ಹಿನ್ನೆಲೆಯಲ್ಲಿ ಸಂಯುಕ್ತ ರಾಷ್ಟ್ರಗಳ ವಲಸೆ ಹಕ್ಕಿಗಳ ಸಂರಕ್ಷಣಾ ಒಪ್ಪಂದದ ಅಡಿಯಲ್ಲಿ 2006 ರಿಂದ ಮೇ ತಿಂಗಳ...

ಸುಶಾಂತ ಆತ್ಮಹತ್ಯೆ ಪ್ರಕರಣ ; ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಮುಂಬೈ ಹೈಕೋರ್ಟ್

ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ರಾಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಹಾಗೂ ಬಾಲಿವುಡ್ ನಲ್ಲಿ ಡ್ರಗ್ಸ್ ನ ಪ್ರಭಾವ ಕುರಿತಂತೆ ಮುಖ್ಯ ಆರೋಪಿಯಾಗಿದ್ದ ರಿಯಾ ಚಕ್ರವರ್ತಿಗೆ ಇಂದು ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ.ಸುಶಾಂತ ಅವರ ಪ್ರೇಯಸಿಯಾಗಿದ್ದ ರಿಯಾ ವಿರುದ್ಧ ಡ್ರಗ್ಸ್ ಸೇವನೆ ಹಾಗೂ ಮಾರಾಟದ ಆರೋಪವಿದೆ. ಸುಶಾಂತ ಅವರಿಗೆ ಡ್ರಗ್ಸ್ ನೀಡಿರುವ ಆರೋಪ...

ಕವನ: ಜಗತ್ತಿನ ಗಾಂಧಿ

🌹ಜಗತ್ತಿನ ಗಾ0ಧಿ🌹 ಗಾ0ಧಿಯೆ0ಬ ಬ0ಡೆಗಲ್ಲಿನ ಆದರ್ಶ ವಿಚಾರಗಳಿಗೆ ಜಗತ್ತೆ ಮ0ಡಿಯೂರಿದೆ ಜಾಗತೀಕರಣದ ಬಿರುಗಾಳಿಯಲ್ಲಿ ನರಳುವ ಇ0ದಿನ ಸ0ಧಿ ಸಮಯದಿ ಸತ್ಯ ಶಾ0ತಿ ಅಹಿಂಸೆಯ ತ0ದೆ ಮತ್ತೆ ಮತ್ತೆ ನೆನಪಾಗುವರು ಹನ್ನೆರಡನೆಯ ಶತಮಾನದ ಮಹಾತ್ಮಾ ಬಸವೇಶ್ವರರು ಸಮಸಮಾಜ ಕಟ್ಟುವಲ್ಲಿ ಕ್ರಾಂತಿ ಮಾಡಿದರು. ಈ ಶತಮಾನದಿ ಸತ್ಯದ ಸರದಾರರು ಶಾ0ತಿಯ ದೂತರು ಅಹಿಂಸೆಯ ಪರಿಪಾಲಕರು ಮಹಾತ್ಮ ಗಾಂಧಿಜಿಯವರು. ಮಹಾತ್ಮಾ ಗಾ0ಧೀಜಿಯವರ ನೇತೃತ್ವದಲ್ಲಿ ಸ್ವಾತ0ತ್ರಕ್ಕಾಗಿ ತಾಯಿ ಭಾರತಾ0ಬೆಯ ಒಡಲ ಧ್ವನಿಗಳೆಲ್ಲ ಒ0ದೇ ಎ0ಬ ಒಗ್ಗಟ್ಟಿನ ಬಲಹುರಿಯಾಗಿ ಸಾಗಿದರು. ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾತ್ಮ ಗಾ0ಧೀಜಿಯವರ ಆದರ್ಶ ವಿಚಾರಗಳು ಅ0ದು ಅವಶ್ಯವಾಗಿದ್ದವು ಇ0ದೂ ಅವಶ್ಯವಾಗಿವೆ ಮು0ದೂ ಬೇಕಾಗಿವೆ.ಸಂಜಯ.ಜಿ.ಕುರಣೆ ಶಿಕ್ಷಕರು ತಾಲೂಕು. ಕಾಗವಾಡ...

ಅಕ್ಟೋಬರ್ 2, ಗಾಂಧಿ ಜಯಂತಿ ವಿಶೇಷ ಚಿಂತನ

ಸತ್ಯ ಪಥದ ನಿತ್ಯ ಸಂತ ಇಂಟ್ರೋ ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಅತ್ಯಂತ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ನವ್ಯಜಗದ ಸಂತನೇ ಈ ಮಹಾತ್ಮಗಾಂಧೀಜಿ.ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪಿತ...

ಗಾಂಧಿ ದನಿ ದರ್ಪಣ –” ಅಮರ ಬಾಪು ಚಿಂತನ “- ಮಾಸಿಕ

ಮಹಾತ್ಮ ಗಾಂಧಿ ಒಂದು ವಿಸ್ಮಯ. ಅವರು ಅಪ್ರಸ್ತುತರು ಎಂದು ಹೇಳುತ್ತಿರುವಾಗಲೇ ಅವರು ಹೆಚ್ಚು ಪ್ರಸ್ತುತರಾಗಿ ಪ್ರಕಟವಾಗಿ ಬಿಡುತ್ತಾರೆ. ಗಾಂಧಿ ವಿಚಾರಧಾರೆ ಅರ್ಥಮಾಡಿಕೊಳ್ಳತ್ತಲೇ ನಾವು ಅವರ ಮಾತಿನ ಆಳ ಅರಿಯದೆ ಗೊಂದಲಕ್ಕೆ ನಿಲುಕುವುದು ಉಂಟು.ಜಗತ್ತು ಕಂಡ ಶ್ರೇಷ್ಟ ಚಿಂತಕ, ನುಡಿದಂತೆ ನಡೆದು ವಿಶ್ವಕ್ಕೇ ಆದರ್ಶಪ್ರಾಯರಾದ ಅಪರೂಪದ ವ್ಯಕ್ತಿ ಮೋಹನದಾಸ ಕರಮಚಂದ ಗಾಂಧಿ . ಈಗಿನ ತಾಂತ್ರಿಕ...

ಇಂದು ಭಗತ್ ಸಿಂಗ್ ಜನ್ಮದಿನ

ಇಂದು ಕ್ರಾಂತಿಕಾರಿ ಭಗತ್ ಸಿಂಗರ ಜನ್ಮ ದಿನ. ಬ್ರಿಟೀಷರ ದಾಸ್ಯದಿಂದ ಭಾರತವನ್ನು ಬಿಡುಗಡೆ ಮಾಡಲು ಅವಿರತ ಹೋರಾಟ ಮಾಡಿ, ನಗುನಗುತ್ತಲೇ ಉರುಳಿಗೆ ಕೊರಳೊಡ್ಡಿದ ವೀರ ಭಗತ್ ಸಿಂಗ್ ಅವರು ಅನವರತವೂ ಯುವಕರಿಗೆ ಸ್ಫೂರ್ತಿ ಮೂರ್ತಿ.ಭಗತ್ ಸಿಂಗ್ ಅವರನ್ನು ಕುರಿತು ದೇಶವಾಸಿಗಳು, ದೇಶಪ್ರೇಮಿಗಳಾದವರು ಅವಶ್ಯ ತಿಳಿಯಬೇಕು. ಅವರ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಕರಣಗಳನ್ನು ಓದಿದರೆ ಭಾರತ...

ಫೇಸ್‌ಬುಕ್‌ ಕಪಲ್ ಛಾಲೇಂಜ್ ; ಫೋಟೋ ಹಾಕುವ ಮುನ್ನ ಎಚ್ಚರ !!

ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಕಪಲ್ ಛಾಲೇಂಜ್ ಎಂಬುದು ಭಾರಿ ಟ್ರೆಂಡ್ ಆಗಿರುವ ಹಿನ್ನೆಲೆಯಲ್ಲಿ ಅದನ್ನು ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದು ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಪುಣೆಯ ಸೈಬರ್ ಕ್ರೈಂ ಪೊಲೀಸರು ಈ ಸಂಬಂಧ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದು ಕಪಲ್ ಛಾಲೇಂಜ್ ನಲ್ಲಿ ಹಾಕುವ ಫೋಟೋಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಹಾಗಾಗಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group