ಸಿಂದಗಿ: ಕಾಂಗ್ರೆಸ್ ಪಕ್ಷ ಯಾವುದೇ ರೂಪದಲ್ಲಿ ಅಧಿಕಾರ ಹಿಡಿಯಬೇಕು ಎಂದು ಹುನ್ನಾರ ನಡೆಸುತ್ತಿದೆ. ಇಂತಹ ಷಡ್ಯಂತ್ರ ನಡೆಯದು. ಕರ್ನಾಟಕದಲ್ಲಿ ಒಂದೇ ಪಕ್ಷದ ಮನೆ ಮೂರು ಬಾಗಿಲಗಳಾಗಿ ದಿನಕ್ಕೊಬ್ಬರ ಮೇಲೆ ಹರಿ ಹಾಯುತ್ತಿರುವುದು ಇದಕ್ಕೆ ದಿಕ್ಕು ಇಲ್ಲ ದಿಸೆಯು ಇಲ್ಲದಂತಾಗಿದೆ ಎಂದು ತಾಂಡಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ ಗುಡಗಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಬಿಜೆಪಿ ಮಂಡಲದವತಿಯಿಂದ ಹಮ್ಮಿಕೊಂಡ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ 65 ವರ್ಷಗಳರೆಗೆ ಅಧಿಕಾರ ನಡೆಸಿದರಿಂದ ಭಿಕ್ಷುಕರ, ರೋಗರುಜಿನಗಳ ದೇಶವೆಂದು ಹೆಸರುವಾಸಿ ಮಾಡಿ ದೇಶವನ್ನು ಸಂಪೂರ್ಣ ಹಾಳು ಮಾಡಿತ್ತು ಆದರೆ ಪ್ರಧಾನಿ ನರೇಂದ್ರ ಮೋದಿಜಿ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಭಾರತ ದೇಶವನ್ನು ಕಳಂಕ ರಹಿತ ದೇಶವನ್ನಾಗಿ ಮಾಡಬೇಕು ಎನ್ನುವ ಗಟ್ಟಿತನದ ವಿಚಾರ ಒಂದು ಏಕೈಕ ಗುರಿಯನ್ನಿಟ್ಟುಕೊಂಡು ಯಾವುದೇ ಕಪ್ಪು ಚುಕ್ಕೆ ಇರದೇ ಅಧಿಕಾರ ನಡೆಸಿದಲ್ಲದೆ ಎಲ್ಲವು ಅಭಿವೃದ್ಧಿ ಪಥದತ್ತ ಕಾಲಿಟ್ಟಿದೆ ಇದನ್ನು ಸಹಿಸದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿ ಅವರು ಬೇರೆ ಬೇರೆ ದೇಶಗಳಲ್ಲಿ ಅನ್ಯ ಪಕ್ಷದ ಜೊತೆ ಸಂಪರ್ಕ ಮಾಡಿಕೊಂಡು ಕೇಂದ್ರ ಸರಕಾರದ ಮೇಲೆ ವಿನಾಕಾರಣ ಗೂಬೆ ಕೂರಿಸುವ ಕಾರ್ಯಕ್ಕೆ ಮುಂದಾಗಿದ್ದನ್ನು ನೋಡಿದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿ ಭಫೂನ ಇದ್ದಂತೆ ಇಂಥವರ ಮಾತಿಗೆ ಯಾರೂ ಕಿವಿ ಕೊಡಬೇಡಿ ಎಂದರು.
ಮಂಡಲ ಅಧ್ಯಕ್ಷ ಈರಣ್ಣಾ ರಾವೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಪರ್ಮನೆಂಟ್ ಕಾರ್ಯಕರ್ತರಿದ್ದಾರೆ ಅದರೆ ಕಾಂಗ್ರೆಸ್ ಪಕ್ಷದ ಹಾಗೆ ಪೇಮೆಂಟ್ ಕಾರ್ಯಕರ್ತರಿಲ್ಲ. ಇಲ್ಲಿ ಪ್ರಧಾನಿಗೂ ಒಂದೇ ಸ್ಥಾನ ಒಬ್ಬ ಕಾರ್ಯಕರ್ತನಿಗೂ ಒಂದೇ ಸ್ಥಾನದಲ್ಲಿ ಕಾಣುತ್ತದೆ ಅದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಸಂದೇಶದಂತೆ ಕರೋನಾ ಸಂದರ್ಭದಲ್ಲಿ ಎಲ್ಲರು ಸಹಭಾಗಿತ್ವದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ ಕಾರಣ ಮುಂಬರುವ ಉಪ ಚುನಾವಣೆ ಮತ್ತು ಜಿಪಂ, ತಾಪಂ ಪುರಸಭೆ, ಪಪಂ ಚುನಾವಣೆಗಳನ್ನು ಸಮರ್ಥವಾಗಿ ನಡೆಸಬೇಕಾಗಿದೆ ಅದಕ್ಕೆ ಎಲ್ಲರು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳಿದರು.
ಬೆಳಗಾವಿ ವಿಭಾಗೀಯ ಪ್ರಭಾರಿ ಚಂದ್ರಶೇಖರ ಕವಟಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸಂಘಟನಾ ಮಂತ್ರಿ ಪ್ರಕಾಶ ಅಕ್ಕಲಕೋಟ, ಲಿಂಬೆ ಅಭಿವೃದ್ಧಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರ, ಬಸವರಾಜ ಕುಂಬಾರ, ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಗುರು ತಳವಾರ ನಿರೂಪಿಸಿದರು. ನಿಂಗರಾಜ ಬಗಲಿ ವಂದಿಸಿದರು..