ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕಾಂಕ್ರೀಟ್ ಕಂಬ

Must Read
       ಮೂಡಲಗಿ: -ಪಟ್ಟಣದ ಕಾಯಿಪಲ್ಯ ಬಜಾರನಲ್ಲಿ ಇದ್ದ  ಹಳೆಯ ಕಟ್ಟಡ ನೆಲ ಸಮ ಮಾಡಿ ಎರಡ್ಮೂರು ವರ್ಷ ಮುಗಿದಿರ ಬಹುದು ಇನ್ನೂ ಅದರ ಉಳಿಕೆಯನ್ನು ಪರಭಾರೆ ಮಾಡುವ ಕೆಲಸ ಪುರಸಭೆಯಿಂದ ಆಗಿಲ್ಲ. ಇದೇ ಹಳೆಯ ಕಟ್ಟಡಕ್ಕೆ ಆಧಾರವಾಗಿ ನಿಂತಿರುವ ಕಾಂಕ್ರೀಟ್ ಕಂಬವೊಂದು ಯಾವಾಗ ಯಾರ ಮೇಲೆ ಬಿದ್ದು ಆಹುತಿ ತೆಗೆದುಕೊಳ್ಳುವುದೋ ಏನೋ ಎಂಬ ಆತಂಕವಿದೆ.
   ಸುಮಾರು ವರ್ಷದ ಹಳೆಯ ಕಟ್ಟಡವನ್ನು ಪುರಸಭೆ ಕೆಡವಿದೆ,ನಾಶವಾದ ಕಟ್ಟಡದ ಕಲ್ಲು,ಮಣ್ಣು ಹಾಗೆ ಇದೆ.ಸ್ವಲ್ಪ ಮಟ್ಟಿಗೆ ಸಳಿ ಹಿಡಿದು ಕೊಂಡು ಇರುವ ಸಿಮೆಂಟಿನ ಕಂಬ ನಿಂತಿರುವುದು ಪುರಸಭೆ ಅಧಿಕಾರಿಗಳಿಗೆ ಕಂಡಿಲ್ಲವಾ…?ಎಂದು ಸಾರ್ವಜನಿಕರ ಪರವಾಗಿ ಹೋರಾಟಗಾರ ಮಹಾಲಿಂಗಯ್ಯ ನಂದಗಾವಮಠ ಕೇಳುತ್ತಿದ್ದಾರೆ.
      ಈಗಾಗಲೇ ಹಲವಾರು ಬಾರಿ ಮೂಡಲಗಿ ಪುರಸಭೆಗೆ ಕೆಲ ಸಮಸ್ಯೆಗಳ ಬಗ್ಗೆ ಹೇಳಲಾಗಿದೆ. ಆದರೂ ಪುರಸಭೆ ಕಿವುಡಾಗಿದೆ. ಯಾವುದೇ ಸುಧಾರಣೆ ಕಾರ್ಯಗಳು ಆಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
  ಸಿಮೆಂಟಿನ ಕಂಬವನ್ನು ಚಿಕ್ಕದಾದ ಕಬ್ಬಿಣದ ಸಳಿ ಹಿಡಿದುಕೊಂಡಿದೆ,ಅದು  ಜನಸಂದಣಿ ಇರುವ ರಸ್ತೆ ಅದು ಯಾರ ಮೇಲೆಯಾದ್ರು ಬಿದ್ದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ.ಇದನ್ನು ಕೂಡಲೇ ನಿವಾರಿಸಬೇಕು. ಮೂಡಲಗಿ ಪಟ್ಟಣವು ಈಗ ತಾಲೂಕು ಕೇಂದ್ರವಾಗಿದೆ,ಪರಸ್ಥಳದಿಂದ ಬಂದವರಿಗೆ ಸ್ವಚ್ಛ ಸುಂದರ ನಗರದಂತೆ ಕಾಣಬೇಕು. ಒಳಚರಂಡಿ ಇರಲಿ,ದೇವಸ್ಥಾನದ ದಾರಿ ಇರಲಿ ಹಾಗೂ ಮುಖ್ಯ ರಸ್ತೆ ಇರಲಿ ಬರಿ ಗಲೀಜು ಕಾಣುತ್ತಿದೆ. ಪುರಸಭೆ ಸ್ವಚ್ಛತೆಗೆ ಗಮನ ಕೊಡಬೇಕು
     ಚರಂಡಿಯ ಮೇಲಿನ ಕಾಂಕ್ರೀಟ್ ಸಳಿಗಳಿಂದ ಈಗಾಗಲೇ ಅನಾಹುತ ಸಂಭವಿಸಿವೆ, ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡು ಪಾಲಕರು ಹಾನಿ ಅನುಭವಿಸುವಂತಾಗಿದೆ ಅನಾಹುತಕ್ಕೆ ಹೊಣೆ ಯಾರು?.ಬಡವರ ಮಕ್ಕಳ ಗೋಳು ಕೇಳುವವರು ಯಾರು ಎಂದು ಕೇಳಿರುವ  ನಂದಗಾಂವಮಠ ಅವರು ಪುರಸಭೆಯವರು ಆದಷ್ಟು ಬೇಗ ಇದನ್ನು ನಿವಾರಿಸಿ ಮುಂದಿನ ಅಪಾಯಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group