ಬೀದರ – ಬೀದರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಚಿರತೆ ದಾಳಿ ಮಾಡಿ ಒಂದು ಆಕಳು ಸಾವಿಗೀಡಾದ ಘಟನೆ ನಡೆದಿದೆ.
ಹುಮನಾಬಾದ ತಾಲೂಕಿನ ಚಿಟಗುಪ್ಪಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಣಕುಣಿ ಗ್ರಾಮದಲ್ಲಿ ಹುಸೇನ್ ಸಾಬ್ ತಂದೆ ಶೇಕ ಅಹ್ಮದ್ ಸಾಬ ರವರ ಹೊಲದಲ್ಲಿ ಮಧ್ಯಾಹ್ನ 2:30 ಗಂಟೆಗೆ ಆಕಳ ಮೇಲೆ ದಾಳಿ ಮಾಡಿದೆ.
ಆಕಳು ಸ್ಥಳದಲ್ಲಿ ಸಾವನ್ನಪ್ಪಿದ್ದು ಕಂಡು ಬಂದಿದೆ ಎಂದು ಪಿ ಎಸ್ ಐ ಮಹೇಂದ್ರ ಕುಮಾರ ಹೇಳಿದ್ದಾರೆ. ಸದರಿ ಸ್ಥಳಕ್ಕೆ ಹುಮನಾಬಾದ ಅರಣ್ಯ ಇಲಾಖೆ ಅಧಿಕಾರಿಗಳು ಭೇಟೆ ನೀಡಿ ಪರಿಶೀಲನೆ ನಡೆಸಿದರು.