ಸಿಎಂ ವಿಚಾರ ಮತ್ತೆ ಮತ್ತೆ ಕೇಳಬೇಡಿ – ಸಂತೋಷ ಲಾಡ್

Must Read

ಬೀದರ – ಹೈಕಮಾಂಡ್ ಹೇಳಿದ್ದೇ ಅಂತಿಮ ಅಂತ ಪ್ರತಿಸಲ ಹೇಳಿದಾಗಲೂ ಮತ್ತೆ ಮತ್ತೆ ಮುಖ್ಯಮಂತ್ರಿ ವಿಷಯ ಕೇಳುವುದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ ಮಾಧ್ಯಮದವರ ಮೇಲೆ ಗರಂ ಆದರು.

ಬೀದರನಲ್ಲಿ ಮಾತನಾಡಿದ ಅವರು, ಸಿ ಎಂ ವಿಷಯ ಕುರಿತಂತೆ ಸಿದ್ರಾಮಯ್ಯ ಹಾಗೂ ಡಿಕೆಶಿಯವರು ಹೈಕಮಾಂಡ್ ಹೇಳಿದಂತೆ ಕೇಳವುದಾಗಿ ಹೇಳುತ್ತಲೇ ಇದ್ದಾಗಲೂ ನೀವು ಅದೇ ವಿಷಯ ಕೇಳಬೇಡಿ ಎಂದರು
ರಾಜ್ಯದಲ್ಲಿ ರಾಷ್ಟಪತಿ ಆಡಳಿತ ಬಗ್ಗೆ ಜಗದೀಶ ಶೆಟ್ಟರ ಹೇಳಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಅಧಿಕಾರಕ್ಕೆ ಬರುವ ಅವಸರವಿದೆ. ಕೇಂದ್ರದಲ್ಲಿ ಲೂಟಿ ಮಾಡುತ್ತಿದ್ದಾರೆ ಈಗ ರಾಜ್ಯದಲ್ಲಿಯೂ ಬೇಗನೇ ಅಧಿಕಾರಕ್ಕೆ ಬಂದು ಲೂಟಿ ಮಾಡುವ ಉದ್ದೇಶವಿದೆ ಅವರಿಗೆ ಎಂದರು.
ಐಎಂಎಫ್ ಭಾರತಕ್ಕೆ ಸಿ ಗ್ರೇಡ್ ಕೊಟ್ಟಿದೆ ಆದರೂ ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ. ಡಾಲರ್ ಇಷ್ಟರಲ್ಲಿಯೇ ನೂರು ರೂ. ಆದರೂ ಅಚ್ಚರಿಯಿಲ್ಲ ಎಂದರು

ಹಾಸ್ಯ ನಟ ಉಮೇಶ ಅವರು ನಿಧನಕ್ಕೆ ಸಂತಾಪ ಸೂಚಿಸಿದ ಲಾಡ್, ಉಮೇಶ ಒಬ್ಬ ಶ್ರೇಷ್ಠ ಹಾಸ್ಯ ನಟರಾಗಿದ್ದರು ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group