spot_img
spot_img

ಮುಸ್ಲಿಮ್ ಹುಡುಗಿಯರ ಜೊತೆ ಸ್ನೇಹ ಬೆಳೆಸಬೇಡಿ – ಈಶ್ವರ ಸಿಂಗ್ ಠಾಕೂರ ಹೇಳಿಕೆ

Must Read

spot_img
- Advertisement -

ಬೀದರ – ಎಲ್ಲಿಯವರೆಗೆ ನಮ್ಮ ಸಮಾಜವನ್ನು ನಾವು ರಕ್ಷಣೆ ಮಾಡಿಕೊಳ್ಳುವುದಿಲ್ಲವೋ ಅಂಥ ಸಮಾಜವನ್ನು ಆ ದೇವರೂ ಕೂಡ ರಕ್ಷಣೆ ಮಾಡಲಾರ. ಆದ್ದರಿಂದ ಹಿಂದೂಗಳು ಪ್ರತಿಯೊಬ್ಬರ ಮನೆಯಲ್ಲೂ ಆತ್ಮರಕ್ಷಣೆಗಾಗಿ ಒಂದೊಂದು ಖಡ್ಗವನ್ನು ಇಟ್ಟುಕೊಳ್ಳಿ ಎಂದು ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ ಹೇಳಿದರು.

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಬೀದರ ನಲ್ಲಿ ಭುಗಿಲೆದ್ದ ಆಕ್ರೋಶ ಪರಿಣಾಮ ಹಿಂದೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಪರಮೇಶ್ವರ ವಿರುದ್ಧ ಕಿಡಿ ಕಾರಿದರು.

ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮುಲ್ಲಾ ಆಗಿದ್ದಾರೆ. ಅವರಿಗೆ ಹಿಂದೂಗಳ ಬಗ್ಗೆ ಕಾಳಜಿ ಇಲ್ಲ. ಗೃಹವ ಸಚಿವ ಪರಮೇಶ್ವರ ಹಾಗು ಸಿದ್ದರಾಮಯ್ಯ ಎಚ್ಚರಿಕೆ ಇರಲಿ. ಅವರು ನಿಮ್ಮ ಕಾಂಗ್ರೆಸ್ ಕಾರ್ಪೋರೇಟರ್ ಮಗಳು ಕಣ್ರೀ, ತಂದೆ ಅಳ್ತಾ ಇದ್ದಾರೆ ನಿಮಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನೆ ಮಾಡಿದರು.ನಮ್ಮ ಹಿಂದೂ ಮಾತೆ ದುರ್ಖಾ ಕೈಯಲ್ಲಿ ತಲವಾರ್ ಇದೆ. ನಾವು ಯಾರ ಮೇಲೂ ದಾಳಿ ಮಾಡೋದಿಲ್ಲ ಆದರೆ ನಮ್ಮ ಮೇಲೆ ದಾಳಿ ಮಾಡಿದವರನ್ನು ಬಿಡುವುದಿಲ್ಲ ಎಂದು ಈಶ್ವರ ಸಿಂಗ್ ಠಾಕೂರ್ ನುಡಿದರು.

- Advertisement -

ಬೀದರ ನಲ್ಲಿರುವ ಶಾಹಿನ್ ದೇಶದ ವಿರುದ್ಧ ಪಿತೂರಿ ಮಾಡಿದ ಶಾಲೆಗೆ ನಿಮ್ಮ ಮಕ್ಕಳಿಗೆ ಹಾಕಬೇಡಿ ಮುಸ್ಲಿಂ ಶಾಲೆಯಲ್ಲಿ ನಿಮ್ಮ ಮಕ್ಕಳ ಅಡ್ಮಿಷನ್ ಮಾಡಬೇಡಿ ನೇಹಾ ಹಾಗೆಯೇ ನಿಮ್ಮ ಮಕ್ಕಳಿಗೂ ಆಗುತ್ತದೆ.ಹಿಂದೂ ಹುಡುಗಿಯರು ಮುಸ್ಲಿಂ ಹುಡುಗಿಯರ  ಜೊತೆಗೆ ಸ್ನೇಹ ಸಂಬಂಧವನ್ನು ಬೆಳೆಸಬೇಡಿ. ಸ್ನೇಹ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ಲವ್ ಜಿಹಾದ್ ಮಾಡಿಸುವ ಷಡಂತ್ರ ನಡೆದಿದೆ. ಮನೆಗೆ ಕರೆದುಕೊಂಡು ಹೋಗಿ ಅವರ ಅಣ್ಣ ತಮ್ಮಗೆ ಲವ್ ಜಿಹಾದ್ ಮಾಡಿಸುತ್ತಾರೆ ಎಂದು ಬೀದರ ನಲ್ಲಿ ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಆಕ್ರೋಶ ವ್ಯಕ್ತಪಡಿಸಿದರು.

ನೇಹಾ ಪ್ರಕರಣದ ಬಗ್ಗೆ  ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುವುದು ಇದೆ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳು ಭಾಗವಹಿಸಿ ಎಂದು ಠಾಕೂರ ಕರೆ ನೀಡಿದರು

 

- Advertisement -

ವರದಿ : ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group