spot_img
spot_img

ವೀರಭದ್ರೇಶ್ವರ ಸ್ವಾಮಿಯ 108 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ದೇಣಿಗೆಗೆ ಚಾಲನೆ

Must Read

- Advertisement -

ಮೂಡಲಗಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ವಿಜಯನಗರ ಜಿಲ್ಲೆಯ ಹಂಪಿ ಹತ್ತಿರ ವಿಶ್ವದಲ್ಲಿಯೇ ಮೊದಲ ಬಾರಿಗೆ ಆಂಜನೇಯಸ್ವಾಮಿಗೆ ಲಿಂಗ ದೀಕ್ಷೆ ನೀಡಿದ ಶ್ರೀ ವೀರಭದ್ರೇಶ್ವರ ಸ್ವಾಮಿಯ 108 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರದೀಪ ಕಂಕಣವಾಡಿ ಅವರ ಸ್ವಗ್ರಾಮವಾದ ಮೂಡಲಗಿ ತಾಲ್ಲೂಕಿನ ರಾಜಾಪೂರ ಗ್ರಾಮದ ಮುಖಂಡ ವಿಠ್ಠಲ ಪಾಟೀಲ ರವರಿಂದ ಮೊದಲ ದೇಣಿಗೆ ಪಡೆದು ದೇಣಿಗೆ ಚಾಲನೆ ನೀಡಿದರು.

ಹಿಂದಿನಿಂದಲೂ ನಡೆದುಕೊಂಡು ಬಂದ ಹಿಂದೂ ಸಂಪ್ರದಾಯದಂತೆ ಹಾಲುಮತ ಸಮಾಜದವರಿಂದ ಮೊದಲು ದೇಣಿಗೆ ಪಡೆಯಲಾಯಿತು. ಸಂಸ್ಕೃತಿಗಳ ನಾಡು ನಮ್ಮ ಭಾರತ ಅದರ ಇತಿಹಾಸ ಮತ್ತು ಆಚರಣೆ ಅದ್ಭುತ. ಅಂತಹ ನಾಡಿನಲ್ಲಿ ಶ್ರೀ ವೀರಭದ್ರೇಶ್ವರ ಮತ್ತು ಆಂಜನೇಯಸ್ವಾಮಿ ಒಂದೇ ಸ್ಥಳದಲ್ಲಿ ಪ್ರತಿಮೆ ಮಾಡುವುದು ನಮ್ಮೆಲ್ಲರ ಹೆಮ್ಮೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ರಾಯಿ ಮರಿಸಿದ್ದಪ್ಪಗೋಳ, ಹಿರಿಯ ಮುಂಖಡರಾದ ರಾಜು ಬೈರುಗೋಳ, ಬೈರಪ್ಪ ಯಕ್ಕುಂಡಿ, ಬಸವರಾಜ ಪಂಡ್ರೋಳಿ, ರಾಮು ಪಾಟೀಲ, ರಾಜು ಪವಾರ ದೇಣಿಗೆ ನೀಡಿದರು ಮತ್ತು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group