- Advertisement -
ನಿಪ್ಪಾಣಿ: ನಗರದ ಮ್ಯಾಗ್ನಂ ಚಿತ್ರಮಂದಿರದಲ್ಲಿ ಸಮಾಜದ ಸಂಜೀವಿನಿ ಕಾರಣಿಕ ಯುಗಪುರುಷ ಲಿಂ. ಹಾನಗಲ್ ಗುರು ಕುಮಾರೇಶ್ವರ ಶಿವಯೋಗಿಗಳ ಜೀವನಾಧಾರಿತ ಚಲನಚಿತ್ರ ವಿರಾಟಪೂರ ವಿರಾಗಿ ಚಲನಚಿತ್ರಕ್ಕೆ ಖಡಕಲಾಟ ಅಪ್ಪನವರು ಚಾಲನೆ ನೀಡಿದರು.
ಕುಮಾರೇಶ್ವರ ವಿರಕ್ತಮಠದ ಒಡೆಯರಾದ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳು, ಹುಕ್ಕೇರಿ ಹಿರೇಮಠದಷ ಬ್ರ ಚಂದ್ರಶೇಖರ ಶಿವಾಚಾರ್ಯರು, ಯರನಾಳದ ಪ ಪೂ ಬ್ರಹ್ಮಾನಂದ ಅಜ್ಜನವರು ಚಲನಚಿತ್ರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿ ಪ್ರಸಾದ್ ಜೊಲ್ಲೆ, ನಗರಾಧ್ಯಕ್ಷ ಜಯವಂತ ಭಾಟಲೆ,ಸಭಾಪತಿ ರಾಜು ಗುಂದೇಶಾ, ನಗರಸೇವಕರಾದ ದೀಪಕ ಪಾಟೀಲ ಸಹಿತ, ವೀರಶೈವ ಮಹಾಸಭಾ ಸದಸ್ಯರು ಖಡಕಲಾಟ ಆಡಿ ಬೆನಾಡಿ 108 ವೈದಿಕ ಪಾಠಶಾಲೆ ವಿದ್ಯಾರ್ಥಿಗಳು ಸದ್ಭಕ್ತರು ಉಪಸ್ಥಿತರಿದ್ದರು.