ಪರಿಸರ ಕವನ

Must Read

ನಮ್ಮುಸಿರನುಳಿಸಿ

ಆಲದ ಮರನೆಟ್ಟ ಕಾಲವೆ ಗತಿಸ್ಯಾವ
ಮೇಲಾದ ನೆರಳ ನೀಡ್ಯಾದ //ಕೇಳಿರಿ
ಸಾಲಿಯ ಮಕ್ಕಳ ಹಾಡೊಂದ//ಪ//

ಉಸಿರಿನ ದ್ಯಾವರು ಹಸಿರಾಗ ಬೆರೆತಾನ
ಕೆಸರು ಕೈಗಿಂದು ನೀಡ್ಯಾನ // ಕೇಳಿರಿ
ಮೊಸರನ್ನ ತಿನ್ನೋ ಭಾಗ್ಯವ//1//

ಮಳೆರಾಯ ಬಂದಾನ ಹೊಳೆಯಾಗಿ ಹರಿದಾನ
ಕಳೆದಾನ ಬಿಸಿಲ ಬೇಗೆಯ// ಕೇಳಿರಿ
ಕೊಳೆಯ ಮಾಡ್ಬೇಡಿ ಹೊಳೆಯನ್ನ//2//

ಕಾಡು ಬೆಳೆಸ್ಯಾರಲ್ಲ ನಾಡಿನ ಹಿರಿಯಾರು
ಮೋಡ ಮಣ್ಣನು ಕಟ್ಟಾಕ// ಕೇಳಿರಿ
ಬಾಡ್ಯಾವ ಕಾಡ ಹಸಿರುಸಿರ//3//


ಶ್ರೀಮತಿ ಬಸಮ್ಮ ಏಗನಗೌಡ್ರ
(ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳೊಂದಿಗೆ)

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group