spot_img
spot_img

ಪರಿಸರ ಕವನ

Must Read

- Advertisement -

ನಮ್ಮುಸಿರನುಳಿಸಿ

ಆಲದ ಮರನೆಟ್ಟ ಕಾಲವೆ ಗತಿಸ್ಯಾವ
ಮೇಲಾದ ನೆರಳ ನೀಡ್ಯಾದ //ಕೇಳಿರಿ
ಸಾಲಿಯ ಮಕ್ಕಳ ಹಾಡೊಂದ//ಪ//

ಉಸಿರಿನ ದ್ಯಾವರು ಹಸಿರಾಗ ಬೆರೆತಾನ
ಕೆಸರು ಕೈಗಿಂದು ನೀಡ್ಯಾನ // ಕೇಳಿರಿ
ಮೊಸರನ್ನ ತಿನ್ನೋ ಭಾಗ್ಯವ//1//

ಮಳೆರಾಯ ಬಂದಾನ ಹೊಳೆಯಾಗಿ ಹರಿದಾನ
ಕಳೆದಾನ ಬಿಸಿಲ ಬೇಗೆಯ// ಕೇಳಿರಿ
ಕೊಳೆಯ ಮಾಡ್ಬೇಡಿ ಹೊಳೆಯನ್ನ//2//

- Advertisement -

ಕಾಡು ಬೆಳೆಸ್ಯಾರಲ್ಲ ನಾಡಿನ ಹಿರಿಯಾರು
ಮೋಡ ಮಣ್ಣನು ಕಟ್ಟಾಕ// ಕೇಳಿರಿ
ಬಾಡ್ಯಾವ ಕಾಡ ಹಸಿರುಸಿರ//3//


ಶ್ರೀಮತಿ ಬಸಮ್ಮ ಏಗನಗೌಡ್ರ
(ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳೊಂದಿಗೆ)

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group