- Advertisement -
ಬೆಂಗಳೂರು: ಬಬ್ರುವಾಹನ ದಂಥ ಪೌರಾಣಿಕ ಹಾಗೂ ಹುಲಿಯ ಹಾಲಿನ ಮೇವು ದಂಥ ಭವ್ಯ ಚಿತ್ರಗಳ ನಿರ್ಮಾಪಕರಾಗಿದ್ದ ಹಾಗೂ ಪ್ರಮುಖ ವಿತರಕರಾಗಿದ್ದ ಕೆ ಸಿ ಎನ್ ಚಂದ್ರಶೇಖರ ಅವರು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಮೇಲಿಂದ ಮೇಲೆ ಹೊಡೆತ ಎದುರಿಸುತ್ತಿರುವ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಕೆ ಸಿ ಎನ್ ನಿಧನದಿಂದ ಮತ್ತೊಂದು ಭಾರೀ ಹೊಡೆತ ಬಿದ್ದಂತಾಗಿದೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
- Advertisement -
ಕರ್ನಾಟಕ ಫಿಲಂ ಛೇಂಬರ್ ಹಾಗೂ SIFCCRIPನ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.