ಸುಗ್ಗಿ ಸಂಭ್ರಮ
ಕೊಡ್ಡಾರೆ ಕಡಿದರೆ ||ಹೊಡ್ಡವ ಹಾಕ್ಯಾರ||
ಬಂಡಿ ಬಂಡಿಯ ಗೊಬ್ಬರ ಹಾಕ್ಯಾರ||
ತೆಳ್ಳಗ ,,,,ಹರಿ ವ್ಯಾರಿ||
ತೆಳ್ಳಗ,,, ಹರವಲ್ಲಿ||ಹೊಳ್ಳಿ ಹೋಳ್ಳಿ ಮಳೆ ಬಂದು||
ಒಳ್ಳೆಯವರ ಭೂಮಿ ಹಸಿಯಾಗಿ||
ದೈವ ,,,,,ಖುಷಿಯಾಗಿ||
ಕೂರಿಗಿ ನಿಂದರು ಶಾರೆ||ಸುರೇಶನ ಮಾರಿಗೆ||
ಕೈ ಮುಚ್ಚಿ ಬೀಜ ಬಿತ್ತು ವರ||
ಹೂಲಿಗೆ,,,,ಎಂದಾರೆ||
ಕೈ ಮುಚಿಯ ಬೀಜ ಬಿಟ್ಟರೆ||ನೋಡ್ಯಾರ||
ಬಂಗಾರದ ಬೆಳೆಯ ಬೆಳದಾರ||
ಅವನ,,,, ಭಾವ ಚಂದ||
ಗೆಜ್ಜಿ ಹಚ್ಚಿದ ಕುಡುಗೋಲು|| ಬಗ್ಗಿ ಬಗ್ಗಿ ಕೊಯ್ದರೆ||
ಸಣ್ಣ ಸಣ್ಣ ಸೂಡ ಬೀಗಿದ್ದಾರೆ||
ಬಣಮಿ,,,,ಒಟ್ಟಾರೆ||
ದೊಡ್ಡದೊಂದು ಹೊಲದಾಗ||
ದೊಡ್ಡದೊಂದು ಕಣ ಮಾಡಿ||
ಐದು ಮಂದಿ ಮುತ್ತೈದೆಯರಿಗೆ ಕರಿ ಸಾರೆ||
ಗೂಡ,,,ಮುರಿ ಸ್ಯಾರಿ||
ಹಂತಿಯ ಹೊಡೆಯ ಅಣ್ಣನ||
ಏನಂತ ಕರೆಯಲಿ||
ಗೌರಮ್ಮನ ಮಗ ಗಣಪಣ್ಣ||
ಮ್ಯಾಲೆ,,, ಬಸವಣ್ಣ||
ಶ್ರೀಮತಿ ಅನುಸೂಯ ಬಾಯಿ. ಎಸ್. ನಾಗನಹಳ್ಳಿ ಗೌರ್ಮೆಂಟ್ ಎಂಪಿಎಸ್ ಲಾಡ ಚಿಂಚೋಳಿ ತಾಲೂಕ್ ಆಳಂದ ಜಿಲ್ಲಾ ಕಲಬುರಗಿ