ಕಣಚೂರು ಆಯುರ್ವೇದ ಆಸ್ಪತ್ರೆ ಉಚಿತ ಚಿಕಿತ್ಸಾ ಶಿಬಿರ

Must Read

ಮಂಗಳೂರು- ಮಂಗಳೂರು ನಾಟೇಕಲ್ಲಿನಲ್ಲಿರುವ ಕಣಚೂರು ಆಯುರ್ವೇದ ಆಸ್ಪತ್ರೆ ವತಿಯಿಂದ ಪೈವಳಿಕೆ ಸಮೀಪದ ಚಿಪ್ಪಾರು ಎಂಬಲ್ಲಿ ಆರೋಗ್ಯ ಶಿಕ್ಷಣಾ ವೇದಿಕೆ ಚಿಪ್ಪಾರು ಇದರ ಆಶ್ರಯದಲ್ಲಿ ದಿನಾಂಕ 12 ರ ಮೇ 25 ರಂದು ಉಚಿತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಯಿತು.

ಎಲ್ಲಾ ವಿಧದ ಕಾಯಿಲೆಗಳಿಗೆ ಸಂಬಂದಿಸಿದ ತಜ್ಞ ವೈದ್ಯರು ಆಯಾಯ ರೋಗಿಗಳಿಗೆ ಸೂಕ್ತ ತಪಾಸಣೆ ನಡೆಸಿ ಸ್ಥಳದಲ್ಲಿಯೇ ರಕ್ತ ಪರೀಕ್ಷೆಗಳನ್ನೂ ನಡೆಸಿ ಅಗತ್ಯವಾದ ಔಷಧಿಗಳನ್ನು ಉಚಿತವಾಗಿ ನೀಡಿದರು ಒಳ ರೋಗಿಗಳಾಗುವ ಅಗತ್ಯ ಉಳ್ಳವರಿಗೆ ಉಚಿತ ಒಳರೋಗಿ ಸೌಲಭ್ಯವನ್ನು ಕಲ್ಪಿಸಲಾಯಿತು.ಪಂಚಕರ್ಮ ಹಾಗೂ ಮೂಲವ್ಯಾಧಿಗೆ ಮಾಡುವ ಕ್ಷಾರ ಕರ್ಮದ ಚಿಕಿತ್ಸೆ ಸಹ ಲಭ್ಯವಿದ್ದು ಅರ್ಹ ರೋಗಿಗಳಿಗೆ ತತ್ ಚಿಕಿತ್ಸೆ ಸೂಚಿಸಲಾಯಿತು.

ಡಾ ರಾಜೇಶ್ ಚಂದ್ರನ್, ಡಾ ಅಶ್ವತಿ, ಡಾ ವೈಷ್ಣವಿ, ಡಾ ಚರಣ್, ಡಾ ನಿಯಾನಾರವರು ವೈದ್ಯಕೀಯ ತಜ್ಞರಾಗಿಯೂ, ದಾದಿಯರಾದ ಅಕ್ಕಮಹಾದೇವಿ ಮತ್ತು ಚಿತ್ರಾ ಹಾಗೂ ರಕ್ತ ತಪಾಸಣೆಯಲ್ಲಿ ರಾಹಿಲಾ ಮತ್ತು ಪ್ರೀತಿಯವರು ಸಹಕರಿಸಿದ್ದರು

ಸಂಸ್ಥೆಯ ಕಾರ್ಯಕ್ರಮ ನಿಯೋಜನೆಯಲ್ಲಿ ಅಭಿಯಾಮೋಲ್ ರೆಜಿ ಸಾರಥ್ಯ ವಹಿಸಿದ್ದರು.


ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು 9
9448216674

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group