ಹುಬ್ಬಳ್ಳಿ: ಧಾರವಾಡ ಕ್ಯಾರಕೊಪ್ಪದಲ್ಲಿನ ಜವಾಹರ ನವೋದಯ ವಿದ್ಯಾಲಯದ 4ನೇ ಬ್ಯಾಚ್ (1990) ನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಕರೊನಾ ವಾರಿಯರ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಗೋವಾದಲ್ಲಿ ನಡೆಯಲಿದೆ.
ಅ. 2 ರಂದು ಬೆಳಗ್ಗೆ ೧೧ ಕ್ಕೆ ಈ ಕಾರ್ಯಕ್ರಮ ಏರ್ಪಾಟಾಗಿದ್ದು ಇಲ್ಲಿ ಅಧ್ಯಯನ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪರೂಪದ ಸಮ್ಮಿಲನದಲ್ಲಿ ಆಸಕ್ತರು ಭಾಗವಹಿಸಲು ವಿಶಾಲ್ ಕಮಟೆ, ಬಸವರಾಜ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.