- Advertisement -
ಬೈಲಹೊಂಗಲ: ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ಉಪನ್ಯಾಸಕ, ಕವಿ ಶ್ರೀಶೈಲ ಚ. ಹೆಬ್ಬಳ್ಳಿ ಅವರ ‘ಜೀವ ಕಾರುಣ್ಯದ ಮಿಡಿತ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಜನೇವರಿ ೨೬ ರಂದು ಮಧ್ಯಾಹ್ನ ೨ ಗಂಟೆಗೆ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಮಹಾ ವಿದ್ಯಾಲಯದಲ್ಲಿ ಜರುಗಲಿದೆ.
ಸವದತ್ತಿ ಕಸಾಪ ಘಟಕದ ಅಧ್ಯಕ್ಷರಾದ ಡಾ. ವಾಯ್. ಎಮ್. ಯಾಕೊಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಗಣಾಚಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿ. ಬಿ. ಗಣಾಚಾರಿ ಉದ್ಘಾಟನೆ ಮಾಡಲಿದ್ದಾರೆ.
ಸವದತ್ತಿಯ ಕವಿ, ವಿಮರ್ಶಕ ನಾಗೇಶ್ ಜೆ. ನಾಯಕ ಕೃತಿ ಬಿಡುಗಡೆಗೊಳಿಸಲಿದ್ದು, ಕೃತಿ ಪರಿಚಯವನ್ನು ಬೈಲಹೊಂಗಲ ಕಸಾಪ ಘಟಕದ ಅಧ್ಯಕ್ಷರಾದ ಎನ್. ಆರ್. ಟಕ್ಕಾಯಿ ಮಾಡಿಕೊಡಲಿದ್ದಾರೆ.
- Advertisement -
ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ಡಾ. ಎಫ್. ಡಿ. ಗಡ್ಡಿಗೌಡರ ಹಾಗೂ ಕವಿ ಶಿವಾನಂದ ಉಳ್ಳಿಗೇರಿ ಆಗಮಿಸುವರೆಂದು ಸಹೃದಯ ಸಾಹಿತ್ಯ ಪ್ರತಿಷ್ಠಾನದ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.