Homeಸುದ್ದಿಗಳುಸೊಲ್ಲಾಪುರದಲ್ಲಿ ಯಶ ಕಂಡ ಕಡಾಡಿ ತಂತ್ರ

ಸೊಲ್ಲಾಪುರದಲ್ಲಿ ಯಶ ಕಂಡ ಕಡಾಡಿ ತಂತ್ರ

ಮೂಡಲಗಿ – ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಉಸ್ತುವಾರಿ ಕೊಟ್ಟಿದ್ದ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸೊಲ್ಲಾಪುರ ಮತ್ತು ಧಾರಾಶಿವ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.

ಕಳೆದ ಒಂದುವರೆ ತಿಂಗಳಿಂದ ಕಡಾಡಿ ಅವರು ಚುನಾವಣಾ ಪ್ರಚಾರಕ್ಕಾಗಿ ಅಲ್ಲಿಯೇ ಬೀಡು ಬಿಟ್ಟು ರಣತಂತ್ರ ಹೆಣೆದಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಿದೆ

ಸೊಲ್ಲಾಪುರದ ಉತ್ತರ, ದಕ್ಷಿಣ ಮತ್ತು ಮಧ್ಯ ಕ್ಷೇತ್ರ, ಅಕ್ಕಲಕೋಟ, ಪಂಡರಪೂರ ಮತ್ತು ತುಳಜಾಪುರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ.

ಇನ್ನು ಕೊಲ್ಲಾಪುರ ದಕ್ಷಿಣ ಕ್ಷೇತ್ರದಲ್ಲಿ ಖಾನಾಪುರ ಶಾಸಕ ವಿಠಲ ಹಲಗೇಕರ ಮತ್ತು ಡಾ. ಸೋನಾಲಿ ಸರ್ನೋಬತ್ ಅವರಿಗೆ ಜವಾಬ್ದಾರಿಯನ್ನು ಕೊಡಲಾಗಿತ್ತು, ಅಲ್ಲಿ ಕೂಡ ಬಿಜೆಪಿ ಗೆದ್ದಿದೆ.

RELATED ARTICLES

Most Popular

error: Content is protected !!
Join WhatsApp Group