ಕಮಕೇರಿ: ಅ.೨೮ ರಂದು ನೂತನ ಬೆಳ್ಳಿರಥದ ರಥೋತ್ಸವ

Must Read

ಕಮಕೇರಿ: ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಶ್ರೀ ಕ್ಷೇತ್ರ ಪಂಢರಪೂರ ಪಾದಯಾತ್ರಾ ಸಮಿತಿಯಿಂದ ಪಾದಯಾತ್ರೆಯ ನಿಮಿತ್ತವಾಗಿ ನೂತನವಾಗಿ ನಿರ್ಮಿಸಿದ ಬೆಳ್ಳಿರಥದ ರಥೋತ್ಸವ ಸಮಾರಂಭ ಅ.೨೮ ರಂದು ಜರುಗಲಿದೆ.

ಅ.೨೮ ರಂದು ಮುಂಜಾನೆ ೮ ಗಂಟೆಗೆ ಯಾದವಾಡದ ನರಸಿಂಹ ಆಚಾರ್ಯ ಜೋಶಿ ಅವರಿಂದ ಶ್ರೀ ಜ್ಞಾನೇಶ್ವರ, ಶ್ರೀ ತುಕ್ಕಾರಾಮ, ಶ್ರೀ ತುಕಾರಾಮ, ಶ್ರೀ ಪಾಂಡುರಂಗ ಪಾದುಕೆಗಳ ಅಭಿಷೇಕ ನಂತರ ಹೊಸಕೋಟಿ ಜಕನೆಮ್ಮ ದೇವಸ್ಥಾನದಿಂದ ಸುಮಂಗಲೆಯರಿಂದ ಕುಂಭಮೇಳ, ವಾಕರಿ ಭಜನೆ ಮತ್ತು ಮಂಗಳವಾದ್ಯದೊಂದಿಗೆ ನೂತನ ಬೆಳ್ಳಿ ರಥ ಕಮಕೇರಿ ಗ್ರಾಮಕ್ಕೆ ಆಗಮಿಸುವುದು.

೧೨ಘಂಟೆಗೆ ಜರುಗುವ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪಂಢರಪೂರದ ಶ್ರೀ ಹ.ಬ.ಪ ಚೈತನ್ಯ ಸದ್ಗುರು ನಾನಾ ಮಹಾರಾಜತ್ಯಾ ವಾಸ್ಕರ ಮತ್ತು ಸಾನ್ನಿಧ್ಯವನ್ನು ಹರಳಕಟ್ಟಿಯ ಬ್ರಹ್ಮವಿದ್ಯಾಶ್ರಮ ಶಿವಾನಂದ ಮಠದ ಸದ್ಗುರು ನಿಜಗುಣ ಸ್ವಾಮೀಜಿ, ತೊಂಡಿಕಟ್ಟಿ ಗಾಳೇಶ್ವರ ಮಠದ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ಚಿಪ್ಪಲಕಟ್ಟಿ-ಸಾಲಹಳ್ಳಿಯ ಬೃಹ್ಮನಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಸಕೋಟಿ ರೇವಯ್ಯಸ್ವಾಮಿ ಮಠದ ಶ್ರೀ ಅಭಿನವ ರೇವಯ್ಯ ಸ್ವಾಮೀಜಿ, ಕಮಕೇರಿಯ ವೃಂದಾರಣ್ಯ ಹರೇಕೃಷ್ಣ ಗುರುಕುಲದ ಶ್ರೀ ಗೋಪೇಶ್ವರ ಪ್ರಭುಜೀ ಮತ್ತು ಸಂಗಮೇಶ್ವರ ಮಠದ ಮಾತ್ರೋಶ್ರೀ ಮಹಾದೇವಿ ತಾಯಿಯವರು ವಹಿಸುವರು.

ಸಾಯಂಕಾಲ ೪ ಘಂಟೆಗೆ ದಾನಿಗಳಿಗೆ ಸನ್ಮಾನ ಸಮಾರಂಭ ಮತ್ತು ೭ ಘಂಟೆಗೆ ಕೋಲ್ಹಾಪೂರದ ಶ್ರಿ ಹ.ಬ.ಪ ತುಕಾರಾಮ ಪವಾರ ಅವರಿಂದ ಕೀರ್ತನೆ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group