ಕವನ: ತೇಜಸ್ಸು !!

Must Read

ತೇಜಸ್ಸು !!

ಮಾಡಿದ್ದು ಪ್ರಖರ
ಮಹೋನ್ನತ ಕಾರ್ಯ
ಹೋದ ಜೀವ ಬರುವದಿಲ್ಲ ಬಿಡಿ
ಅದೆಷ್ಟೋ ಜೀವಗಳಿಗೆ ನೀನಾದೆ ತೇಜ.

ಅಗೋ ಆ ಭಂಡರೋ
ಮತಾವಲಂಬಿ ಠಕ್ಕರೋ
ಆಗಲೇ ಅವರ ನಾಲಿಗೆಯೋ
ಕೆನ್ನಾಲಿಗೆಯಾಗಿ ದೌಡಾಯಿಸುತ್ತಿವೆ
ನಿನ್ನ ತೇಜಸ್ಸಿಗೆ
ಲಂಡರ ಅಂಡಿಗೆ ಉರಿಯಾಗಿ.

ಅಲ್ಲಿರುವವರೆಲ್ಲರ ದೋಸೆ ತೂತುಗಳೇ
ಮಿಲಾಪಿ ಕುಸ್ತಿಯವರೇ
ಪಗಡೆ ಆಟವೂ ಅಲ್ಲಡಗಿದೆ !
ಲಫಂಗ-ಡಕಾಯಿತ-ಅನಕ್ಷರಸ್ತ ಪಡೆಯೇ
ಹರಿಯಾಯಲು
ದೀಪದ ಬೆಳಕಿಗೆ ಕಾಡಿಗೆ ಕಾರಣ !!

ನಿನ್ನ ದೇಶಾಭಿಮಾನ ಬೆಳಗಲಿ
ನಿನ್ನ ಪ್ರದೇಶಾಭಿಮಾನ ಬೆಳಗಲಿ
ನಿನ್ನ ಸ್ವಾಭಿಮಾನ ಬೆಳಗಲಿ
ನಿನ್ನ ಸೇವೆ ಪ್ರಜ್ವಲಿಸಲಿ
ಪುಂಡು-ಪೋಕರಿಗಳ ಮಧ್ಶ
ತೇಜಸ್ವಿ ಸೂರ್ಯ
ನೊಂದವರಿಗೆ ಬೆಳಕಾಗಲಿ!!


ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ಬು.ಬ.ನಗರ, ಕುಷ್ಟಗಿ
9900504639

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group