ಕವನ: ತೇಜಸ್ಸು !!

Must Read

ತೇಜಸ್ಸು !!

ಮಾಡಿದ್ದು ಪ್ರಖರ
ಮಹೋನ್ನತ ಕಾರ್ಯ
ಹೋದ ಜೀವ ಬರುವದಿಲ್ಲ ಬಿಡಿ
ಅದೆಷ್ಟೋ ಜೀವಗಳಿಗೆ ನೀನಾದೆ ತೇಜ.

ಅಗೋ ಆ ಭಂಡರೋ
ಮತಾವಲಂಬಿ ಠಕ್ಕರೋ
ಆಗಲೇ ಅವರ ನಾಲಿಗೆಯೋ
ಕೆನ್ನಾಲಿಗೆಯಾಗಿ ದೌಡಾಯಿಸುತ್ತಿವೆ
ನಿನ್ನ ತೇಜಸ್ಸಿಗೆ
ಲಂಡರ ಅಂಡಿಗೆ ಉರಿಯಾಗಿ.

ಅಲ್ಲಿರುವವರೆಲ್ಲರ ದೋಸೆ ತೂತುಗಳೇ
ಮಿಲಾಪಿ ಕುಸ್ತಿಯವರೇ
ಪಗಡೆ ಆಟವೂ ಅಲ್ಲಡಗಿದೆ !
ಲಫಂಗ-ಡಕಾಯಿತ-ಅನಕ್ಷರಸ್ತ ಪಡೆಯೇ
ಹರಿಯಾಯಲು
ದೀಪದ ಬೆಳಕಿಗೆ ಕಾಡಿಗೆ ಕಾರಣ !!

ನಿನ್ನ ದೇಶಾಭಿಮಾನ ಬೆಳಗಲಿ
ನಿನ್ನ ಪ್ರದೇಶಾಭಿಮಾನ ಬೆಳಗಲಿ
ನಿನ್ನ ಸ್ವಾಭಿಮಾನ ಬೆಳಗಲಿ
ನಿನ್ನ ಸೇವೆ ಪ್ರಜ್ವಲಿಸಲಿ
ಪುಂಡು-ಪೋಕರಿಗಳ ಮಧ್ಶ
ತೇಜಸ್ವಿ ಸೂರ್ಯ
ನೊಂದವರಿಗೆ ಬೆಳಕಾಗಲಿ!!


ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ಬು.ಬ.ನಗರ, ಕುಷ್ಟಗಿ
9900504639

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group