ಕವನ: ಕಿತ್ತೂರಿನ ಕಲಿಯಿವಳು

Must Read

ಕಿತ್ತೂರಿನ ಕಲಿಯಿವಳು

ಕಿತ್ತೂರಿನ ಕಲಿಯಿವಳು ಕತ್ತಿಯನು ಹಿಡಿದವಳು
ಸುತ್ತೇಳು ನಾಡಿನೊಳು ಹೆಸರಾದವಳು
ಉತ್ತುವರು ನಾವುಗಳು ಬಿತ್ತುವರು ನಾವಿರಲು
ಮತ್ತೇತಕೆ ಕಪ್ಪವದು ಎಂದವಳು//ಪ

ಮಲ್ಲಸರ್ಜನ ಮಡದಿ ಬಿಲ್ವಿದ್ಯೆ ಕಲಿತವಳು
ಭಲ್ಲೆಯಲಿ ಗುರಿಯಿಟ್ಟು ಹೊಡೆದವಳು
ಕ್ಷುಲ್ಲತನದಾಂಗ್ಲರ ಸೊಲ್ಲನಡಗಿಸಿದಂತ
ಬಲ್ಲಿದನು ರಾಯಣ್ಣನ ರಾಜಮಾತೆ//1

ಮಕ್ಕಳನು ಹೊಂದಿರದೆ ಕಕ್ಕುಲತೆ ಹೊಂದುತಲಿ
ತಕ್ಕಮಗು ದತ್ತಕ್ಕೆ ಪಡೆದಂತವಳು
ಹಕ್ಕದುವೆ ಇಲ್ಲವೆನೊ ದತ್ತುಮಕ್ಕಳಿಗೆಂಬ
ಸೊಕ್ಕಿನ ಥ್ಯಾಕರೆಯನೆದುರಿಸಿದಳು//2

ಕನ್ನಡದ ನಾಡಿನೊಳು ಕುನ್ನಿಗಳು ಆಂಗ್ಲರಿಗೆ
ಮನ್ನಣೆಯ ಕೊಡದಿರುತ ಪ್ರತಿಭಟಿಸಿ
ತನ್ನತನ ಮರೆಯದೆ ಕನ್ನಡದ ನೆಲಕಾಗಿ
ಚೆನ್ನಮ್ಮ ಪ್ರಾಣವ ತೆತ್ತಿಹಳು//3

ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವದ
ಶುಭಾಶಯಗಳು


ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ
ತಾ ಸವಣೂರು ಜಿ ಹಾವೇರಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group