Homeಸುದ್ದಿಗಳುಕವನ - ಕಿರಣ ಯಲಿಗಾರ

ಕವನ – ಕಿರಣ ಯಲಿಗಾರ

ಗುರಿ ಮತ್ತು ಕನಸು

ಕನಸು ಕಾಣುತ ಯೋಜನೆಗಳ
ಬೆನ್ನೇರಿ
ಬೇರೆ ಆಸೆಗಳಿಗೆ ಬಿದ್ದು
ಜಾರದಿರಿ
ಅಪಮಾನಗಳಿಗೆ ನೀವೇಕೆ
ಅಂಜುವಿರಿ
ಗೆದ್ದರೆ ಜೀವನದಲ್ಲಿ ನಕ್ಷತ್ರ
ಆಗುವಿರಿ
ಸೋತರೆ ಇನ್ನೊಬ್ಬರಿಗೆ
ಪಾಠವಾಗುವಿರಿ
ಕೇವಲ ಕನಸು ಕಾಣುತ
ಮಲಗಬೇಡಿರಿ
ಜೀವನದಲ್ಲಿ ಎಂದೆಂದು
ಸಾಧಕರಾಗಿರಿ
ಕಳೆದ ಸಮಯ ಬಾರದು
ಮರೆಯದಿರಿ
ನಮ್ಮ ಹಣೆಬರಹವನ್ನು
ದೂಷಿಸದಿರಿ
ಹೋರಾಡಿ ಆತ್ಮವಿಶ್ವಾಸದ
ರಥವನ್ನೇರಿ
ಕುಳಿತು ಆಗಬೇಡಿ
ಸೋಮಾರಿ
ಸಾಧನೆಯ ಮೆಟ್ಟಿಲನ್ನು
ಸಾವಧಾನವಾಗಿ ಏರಿ
ಒಂದೂಂದೆ ಹೆಜ್ಜೆ ಇಡುತ
ಮುಟ್ಟು ನೀ ಗುರಿ


ವೀರ ಯೋಧರು

ಕಾರ್ಗಿಲ್ ಕಣಿವೆಯ
ಕತ್ತಲಲ್ಲಿ
ಮೈಕೊರೆಯುವ
ಚಳಿಯಲ್ಲಿ
ಸುಂಯ್ ಎಂದು ಸೀಳಿ
ಬರುವ ಶೆಲ್ ದಾಳಿಗೆ
ನಡುಗಬೇಕು ಎಂಥವರ
ಎದೆ ಗುಂಡಿಗೆ
ಬಂದೂಕು ಹಿಡಿದ ಕೈ
ಬೆರಳುಗಳು
ಸಿದ್ಧವಾಗಿವೆ ವೈರಿಗಳ
ಎದೆ ಸೀಳಲು
ವೈರಿಗಳ ಸರ-ಸರ
ಸಪ್ಪಳಕೆ
ಗರ್ಜಿಸಿತು ಸೈನಿಕರ
ತುಪಾಕಿ
ಉರುಳಿದವು ಶತ್ರುಗಳ
ಹೆಣಗಳು ಧರೆಗೆ
ವಿಮೋಚನೆ ಸಿಕ್ಕಿತು
ಕಾರ್ಗಿಲ್ ಭೂಮಿಗೆ
ದೇಶ ನಮಿಸಿತ್ತು ಎಲ್ಲ
ವೀರ ಯೋಧರಿಗೆ
ಹೆಮ್ಮೆಯ ನಮ್ಮ ಭಾರತಾಂಬೆಯ
ಪುತ್ರರಿಗೆ

ಕಿರಣ.ಯಲಿಗಾರ
ಮುನವಳ್ಳಿ
9972370802

RELATED ARTICLES

Most Popular

error: Content is protected !!
Join WhatsApp Group