Homeಸುದ್ದಿಗಳುಕಲಿಕೋಪಕರಣಗಳ ವಿತರಣಾ ಸಮಾರಂಭ

ಕಲಿಕೋಪಕರಣಗಳ ವಿತರಣಾ ಸಮಾರಂಭ

ಯಕ್ಕುಂಡಿ :ಸವದತ್ತಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯ ಪ್ರಾಥಮಿಕ ಶಾಲೆ ಯಕ್ಕುಂಡಿ ಯಲ್ಲಿ ಸಮರ್ಥನಂ ಸಂಸ್ಥೆ ಬೆಳಗಾವಿ ಇವರು ಕೊಡಮಾಡಿದ ವಿಕಲಚೇತನ ಮಕ್ಕಳ ಕಲಿಕೋಪಕರಣಗಳ ವಿತರಣಾ ಸಮಾರಂಭ ಇತ್ತೀಚೆಗೆ ಜರುಗಿತು.

ಸಮಾರಂಭ ದ ಅಧ್ಯಕ್ಷತೆ ಯನ್ನು ಯಕ್ಕುಂಡಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಎನ್ ಬಿ ಪೆಂಟೇದ ವಹಿಸಿದ್ದರು. ಮುನವಳ್ಳಿ ವಲಯದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಡಿ ಎಲ್ ಭಜಂತ್ರಿ. ಸಮರ್ಥನಂ ಸಂಸ್ಥೆ ಬೆಳಗಾವಿ ಯ ಸವದತ್ತಿ ತಾಲೂಕ ಸಮನ್ವಯ ಶಿಕ್ಷಣ ಶಿಕ್ಷಕ ಹನುಮಂತ ಅಣ್ಣೀಗೇರಿ, ಶಾಲೆಯ ಪ್ರಧಾನ ಗುರುಮಾತೆಯರಾದ ಶ್ರೀಮತಿ ವಿ ಎಸ್ ಗದ್ದಿಗೌಡರ, ಜಾವೀದ್ ಸೂಳೆಭಾವಿ, ಯಕ್ಕುಂಡಿ ಗ್ರಾಮ ಪಂಚಾಯಿತಿ ವ್ಹಿ. ಆರ್ ಡಬ್ಲು ರಾಜು ನಿಗಡೆ, ವಿಕಲಚೇತನ ಮಕ್ಕಳ ಪಾಲಕರು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣ, ಅವರು ಸ್ವತಂತ್ರವಾಗಿ ಬದುಕುವ ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಪಾಲಕರ ಹಾಗೂ ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯವಾಗಿದೆ ಅವರಿಗೆ ಕಲಿಕೋಪಕರಣಗಳ ವಿತರಣೆ ಮಾಡುತ್ತಿರುವ ಸಮರ್ಥನಂ ಸಂಸ್ಥೆಯ ಕಾರ್ಯ ಶ್ಲಾಘನೀಯ ಹಾಗೂ ಎಲ್ಲ ಪಾಲಕರು ಅದರ ಸದುಪಯೋಗ ಪಡೆದುಕೊಂಡು ಮಕ್ಕಳು ಸ್ವಾವಲಂಬಿಯಾಗಿ ಬದುಕುವಂತೆ ಪ್ರೆರೇಪಿಸಿರಿ ಎಂದು ಯಕ್ಕುಂಡಿ ಸಮೂಹ ಸಂಪನ್ಮೂಲ ವ್ಯಕ್ತಿ ಎನ್ ಬಿ ಪೆಂಟೇದ ತಿಳಿಸಿದರು.

ಸಮರ್ಥನಂ ಸಂಸ್ಥೆ ವಿಕಲಚೇತನ ಮಕ್ಕಳ ಸಲುವಾಗಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಗಳ ಕುರಿತು ಡಿ ಎಲ್ ಭಜಂತ್ರಿ ತಿಳಿಸುತ್ತಾ ಮಕ್ಕಳ ಶಿಕ್ಷಣಕ್ಕಾಗಿ ವಿತರಿಸುವ ಕಿಟ್ ಒಳಗೊಂಡ ಸಾಮಗ್ರಿಗಳನ್ನು ಈ ಸಂದರ್ಭದಲ್ಲಿ ಪರಿಚಯಿಸುವ ಜೊತೆಗೆ ಮಕ್ಕಳಿಗೆ ವಿತರಣಾ ಸಮಾರಂಭ ಜರುಗಿಸಿದರು.

ಶಾಲೆಯ ಶಿಕ್ಷಕರು ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group