spot_img
spot_img

ಸಂತಸದ ಕಲಿಕೆ ಸ್ವವೇಗದ ಕಲಿಕೆಯ ನಲಿಕಲಿ ಕಲಿಕಾ ಚೇತರಿಕೆ ತರಬೇತಿ

Must Read

- Advertisement -

ಮುನವಳ್ಳಿ: “ಶಿಕ್ಷಣ ಕ್ಷೇತ್ರವನ್ನು ಬಹುವರ್ಗ ಮತ್ತು ಬಹುಹಂತದ ಕಲಿಕೆಯ ಸವಾಲುಗಳನ್ನು ಎದುರಿಸಲಿಕ್ಕೆ ನಲಿಕಲಿ ಪದ್ದತಿಯನ್ನು ಅಳವಡಿಸಲಾಯಿತು. ಇದರಲ್ಲಿ ಸಂತಸದ ಕಲಿಕೆ ಮತ್ತು ಸ್ವವೇಗದ ಕಲಿಕೆಯಿದೆ. ಈಗ ಇಲಾಖೆ ಕಲಿಕಾ ಚೇತರಿಕೆ ತರಬೇತಿಯನ್ನು ಅಳವಡಿಸುವ ಮೂಲಕ ಪುನಶ್ಚೇತನ ನೀಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ”ಎಂದು ಸಿಂದೋಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ಎ. ಹೊನ್ನಳ್ಳಿ ತಿಳಿಸಿದರು.

ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಲಿ-ಕಲಿ ಶಿಕ್ಷಕ, ಶಿಕ್ಷಕಿಯರಿಗಾಗಿ ಎರಡು ದಿನಗಳ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಕಿತ್ತೂರ, ಯಲ್ಲಪ್ಪ ಕೌಜಲಗಿ, ಸಿಆರ್‌ಪಿಗಳಾದ ನಾಗೇಶ ಹೊನ್ನಳ್ಳಿ, ಬಿ.ಎಸ್.ಚಿಪ್ಪಲಕಟ್ಟಿ, ಮೀರಾ ಮುರನಾಳ, ಶಿಕ್ಷಕ ಸಂಘದ ಪ್ರತಿನಿಧಿಗಳಾದ ಅನುಸೂಯಾ ಮದನಬಾವಿ, ಮಲ್ಲಿಕಾರ್ಜುನ ಹೊಂಗಲ, ವಿ.ಐ.ಜೈನರ, ಶಿಕ್ಷಕರಾದ ವಿ.ವಿ.ಕೊಳಕಿ, ಎಂ.ಎಸ್.ಕೊಳಚಿ, ಪಿ.ಎಸ್.ಕಮತಗಿ, ಸುಜಾತಾ ಹೊನ್ನಳ್ಳಿ, ಕೆ.ಎಸ್.ತಟವಟೆ, ಎಸ್.ಆರ್.ಜೋಗೇರ ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group