ಮುರಗೋಡ ಮಠಕ್ಕೆ ಸಂಸದೆ ಅಂಗಡಿ ಭೇಟಿ

Must Read

ಬೈಲಹೊಂಗಲ – ಬೆಳಗಾವಿ  ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಸಂಸದೆ ಮಂಗಲ ಅಂಗಡಿಯವರು ಮುರಗೋಡ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ  ಪೂಜೆ ಸಲ್ಲಿಸಿದರು.

ನಂತರ ಮಠದ ಪೀಠಾಧಿಕಾರಿ ಪೂಜ್ಯ ಶ್ರೀ ನೀಲಕಂಠ ಸ್ವಾಮೀಜಿ ಅವರನ್ನು ಸನ್ಮಾನಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಹಿರಿಯ ಮುಖಂಡರು ಶಂಕ್ರಯ್ಯ ಮಲ್ಲಯ್ಯನವರ, ಬಸಪ್ಪ ತೆರಗಾವಿ, ಅಶೋಕ ಶೆಟ್ಟರ, ತಾ  ಪಂ  ಸದಸ್ಯ ಸುರೇಶ ಮ್ಯಾಕಲ್, ಲಕ್ಕಪ್ಪ  ಕಾರಗಿ, ಗುರುಪಾದ ಕಳ್ಳಿ,  ಮಹೇಶ ಹುಡೇದ,  ಜಗದೀಶ ಸೋಮಾಪುರ, ಸುರೇಶ ಚಿಕ್ಕೊಪ್ಪ, ಶ್ರೀಕಾಂತ ಶಿರಹಟ್ಟಿ, ಮಹಾದೇವ  ಕುಂಬಾರ ಸೇರಿದಂತೆ  ಅನೇಕರು  ಈ  ಸಂದರ್ಭದಲ್ಲಿ  ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group