Homeಸುದ್ದಿಗಳುಮನುಷ್ಯನನ್ನು ಗುಣದಿಂದ ಅಳೆಯಬೇಕು - ಅರಭಾವಿಯ ಗುರುಬಸವಲಿಂಗ ಸ್ವಾಮಿಗಳ ಅಭಿಮತ

ಮನುಷ್ಯನನ್ನು ಗುಣದಿಂದ ಅಳೆಯಬೇಕು – ಅರಭಾವಿಯ ಗುರುಬಸವಲಿಂಗ ಸ್ವಾಮಿಗಳ ಅಭಿಮತ

ಮೂಡಲಗಿ: ‘ಮನುಷ್ಯನನ್ನು ಗುಣದಿಂದ ಅಳೆಯಬೇಕು ಹೊರತು ದುಡ್ಡು, ಅಧಿಕಾರ, ಅಂತಸ್ತಿನಿಂದಲ್ಲ’ ಎಂದು ಅರಭಾವಿಯ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಹೇಳಿದರು.

ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜವು ಗುಣವಂತರನ್ನು ಮರೆತು ಅಧಿಕಾರ ಮತ್ತು ಹಣವಂತರಿಗೆ ಬೆಲೆ ಕೊಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಇಂದು ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗುತ್ತಿದ್ದು ಇದರಿಂದ ತಂದೆ, ತಾಯಿ, ಸಹೋದರ, ಸಹೋದರಿಯರ ಸಂಬಂಧಗಳು ಕಳಚಿಕೊಳ್ಳುತ್ತಿವೆ ಎಂದರು.

ಸದಲಗಾದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವೀರೇಶ ಪಾಟೀಲ ‘ಕೌಟುಂಬಿಕ ಮೌಲ್ಯಗಳು’ ವಿಷಯ ಕುರಿತು ಮಾತನಾಡಿ ತಂದೆ, ತಾಯಿ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿರುವುದರಿಂದ ಮಕ್ಕಳ ಭವಿಷ್ಯದಲ್ಲಿ ಏರುಪೇರು ಆಗುತ್ತಲಿದೆ. ಕುಟುಂಬದ ವ್ಯವಸ್ಥೆ ಚೆನ್ನಾಗಿದ್ದರೆ ಮಕ್ಕಳು ಏಳ್ಗೆಯನ್ನು ಕಾಣುವರು ಎಂದರು.

ಘಟಪ್ರಭಾ ಪಿಎಸ್‌ಐ ಎಸ್.ಆರ್. ಕಣವಿ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರು ಮಹೇಶ ಬಾಗಡೆ ಮಾತನಾಡಿದರು.
ಯಲ್ಲಪ್ಪ ಗೌಡರ, ಲಕ್ಷ್ಮಣ  ಸಂಗೋಟಿ, ಆನಂದ ಹಣಜಾಗೋಳ ಅವರನ್ನು ಸನ್ಮಾನಿಸಿದರು.
ಅಪ್ಪಾಸಾಹೇಬ ಕುರುಬರ ತಂಡದಿಂದ ಸಂಗೀತ ಕಾರ‍್ಯಕ್ರಮ ಜರುಗಿತು. ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group