- Advertisement -
ಕೊಪ್ಪಳದ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿಣಿಯು ಪ್ರತೀ ವರ್ಷ ಸಿನಿ ಮತ್ತು ಸಮಾಜ ಸಾಧಕರಿಗೆ ಕೊಡಮಾಡುವ ನಮ್ಮ ಸ್ಟಾರ್ ಅವಾರ್ಡನ್ನು ಮೂಡಲಗಿಯ ಸಿನಿಮಾ ಕಲಾವಿದ ಮಂಜುನಾಥ ರೇಳೆಕರ ಅವರಿಗೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಪೂಜ್ಯ ಮಹಾದೇವ ದೇವರು ಮುಂಡರಗಿ, ಜಾನಪದ ಕಲಾ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಜೋಗತಿ ಮಂಜಮ್ಮ, ಹೈಬ್ರೀಡ್ ಸುದ್ದಿ ವಾಹಿಣಿಯ ಬಿ ಎನ್ ಹೊರಪೇಟಿ ನೇತೃತ್ವದಲ್ಲಿ ಅನೇಕ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.