ಕವನ: ಅಸ್ತಿತ್ವ…

Must Read

ಅಸ್ತಿತ್ವ

ಸತ್ತಹೋಗಿದ್ದ ಆತ್ಮೀಯರೊಬ್ಬರ
ಮೊಬೈಲ್ ಗೆ
ಅಕಸ್ಮಾತ್ ಆಗಿ
ಕರೆ ಮಾಡಿದಾಗ
ದೊರೆತ ಉತ್ತರ
ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ..
ಅವರು ಅಸ್ತಿತ್ವ ಕಳೆದುಕೊಂಡಿದ್ದು
(ಅವರ ಮನೆಯವರ ಮನದಲ್ಲಿ)
ಕೇಳಿ,ನೋಡಿ,ಗಮನಿಸಿ
ಕಣ್ಣಲ್ಲಿ ಹನಿ ಜಿನುಗಿತು..
ಸತ್ತವ ತನ್ನ ಅಸ್ತಿತ್ವ
ಕಳೆದುಕೊಳ್ಳುವುದಾದರೆ,
ಬದುಕಿದ್ದಾಗ ಪ್ರೀತಿಯ ನಾಟಕ ಏಕೆ ಬೇಕು…‌..?
ಸಮಾಜ ನೆನಪಿಸಿಕೊಳ್ಳುವಂಥ
ಏನಾದರೂ ಕೆಲಸ ಮಾಡೋಣ…
ಮನೆಯವರು ಮರೆತರೂ,
ಸಮುದಾಯದ ನೆನಪಲ್ಲಿ
ಚಿರಕಾಲ ಉಳಿದುಬಿಡೋಣ..


ಡಾ.ಭೇರ್ಯ ರಾಮಕುಮಾರ್
ಮೈಸೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group