ನೀಲಗಂಗಾ ದೇವಿ ಜಾತ್ರಾ ಮಹೋತ್ಸವ

Must Read

ಸಿಂದಗಿ – ಸಿಂದಗಿ ಪಟ್ಟಣದ ಆರಾಧ್ಯ ದೈವ  ತಾಯಿ ನೀಲಗಂಗಾ ದೇವಿ ಜಾತ್ರೆಯು ರವಿವಾರ ಅತ್ಯಂತ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಜರುಗಿತು.

ಸ್ಥಳೀಯ ಸಾರಂಗಮಠದ ಪರಮ ಪೂಜ್ಯಶ್ರೀ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ತಾಯಿ ನೀಲಂಗಾದೇವಿಯ ಪಲ್ಲಕ್ಕಿಯು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ದಿಂಡರಕಿ ಗೈದರು. ಪಲ್ಲಕ್ಕಿ ಮಹೋತ್ಸವ ದೇವಸ್ಥಾನದಿಂದ ಹಳೆ ಬಜಾರ್ ರಸ್ತೆಯ ಮಾರ್ಗವಾಗಿ ಸ್ಥಳೀಯ ಶ್ರೀ ಬಸವಣ್ಣ ದೇವರ ಗುಡಿಗೆ ಸಾಗಿ ಬಂತು. ಮಾರ್ಗ ಮಧ್ಯದಲ್ಲಿ ಅನೇಕ ಮುತ್ತೈದರು, ಭಕ್ತರು ಆರತಿ ಬೆಳಗಿ ಆಶೀರ್ವಾದ ಪಡೆದುಕೊಂಡರು.

ಗೌರಿ ಹುಣ್ಣಿಮೆಯಿಂದ ಪ್ರಾರಂಭವಾದ  ನೂರಾರು ಭಕ್ತರ ನಿರಹಾರ ಸೇವೆ ಪಲ್ಲಕ್ಕಿ ದೇವಸ್ಥಾನಕ್ಕೆ ಮರಳಿ ಬಂದ ನಂತರ ಮುಕ್ತಾಯಗೊಳಿಸಿದರು. ಪಲ್ಲಕ್ಕಿಗೆ ಮಾಡಿದ ವಿವಿಧ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಜಾತ್ರೆಯಲ್ಲಿ  ಪುರವಂತರ ಸೇವೆ, ನಂದಿಕೋಲು ಸೇವೆ, ಡೊಳ್ಳು ಕುಣಿತ, ಸನಾದಿ, ಮ್ಯೂಸಿಕಲ್ ಬ್ರಾಂಡ್ ಸೇರಿದಂತೆ ವಿವಿಧ ವಾದ್ಯಗಳು ಕಂಡುಬಂದವು.

ಜಾತ್ರಾ ನೇತೃತ್ವವನ್ನು ಧರ್ಮದರ್ಶಿ  ಸುನೀಲ ಶಿರೂಗೌಡ ದೇವರಮನಿ ವಹಿಸಿದ್ದರು. ಜಾತ್ರಾ ಮೆರವಣಿಗೆಯಲ್ಲಿ ಅಶೋಕಗೌಡ ದೇವರಮನೆ, ಅಶೋಕ ವಾರದ, ನೀಲಪ್ಪಗೌಡ ಬಿರಾದಾರ, ಗುಂಡಪ್ಪ ಪಡ ಗನೂರ, ದುಂಡಪ್ಪ  ಸೊನ್ನದ,  ಉಮೇಶ. ಪಟ್ಟಣಶೆಟ್ಟಿ ಬಾಬು ರೇಬಿನಾಳ, ಈಶಪ್ಪ ರೆಬಿನಾಳ ದಯಾನಂದ ಪತ್ತಾರ, ಡಾ. ವಿಜಯಕುಮಾರ ವಾರದ, ಮುತ್ತು ಮುಂಡೇವಾಡಗಿ, ಗೊಲ್ಲಾಳಪ್ಪ ಸಾವಳಗಿ, ಮಲ್ಲಿಕಾರ್ಜುನ ಬೋಮ್ಮಣ್ಣಿ,   ದಯಾನಂದ ಇವಣಿ, ವಿಶ್ವನಾಥ ಭೈರಿ, ಶಂಕರೇಪ್ಪ ಗೋಣಿ, ಚನ್ನಪ್ಪ ಗೋಣಿ, ಬಾಬು ಕಮತಗಿ ಅಣ್ಣು ಕಿಣಗಿ, ಬಸುಗೌಡ ಪಾಟೀಲ, ಬಸವರಾಜ ಜೋಗುರ,  ರವಿ ಗೌಸಾನಿ, ಅಶೋಕ ಅಲ್ಲಾಪುರ, ಮುತ್ತು ಪಟ್ಟಣಶೆಟ್ಟಿ,  ಡಾ. ಶರಣಬಸವ ಜೋಗುರ, ಶ್ರೀಶೈಲ ನಂದಿಕೋಲ, ಪ್ರಕಾಶ ಗುಣಾರಿ, ಸಂತೋಷ ಪಟ್ಟಣಶೆಟ್ಟಿ, ಕಿರಣ್ ಕೋರಿ, ಸಿದ್ದಲಿಂಗ ಕಿಣಗಿ, ಪ್ರವೀಣ ಪತ್ತಾರ, ಶ್ರೀಧರ ಬೊಮ್ಮಣ್ಣಿ, ಕುಮಾರ ಕಿಣಗಿ, ಗಂಗಾಧರ ಕಿಣಗಿ, ರಾಹುಲ ಪಟ್ಟಣಶೆಟ್ಟಿ ,   ರಾಚು ಕಿಣಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

- Advertisement -
- Advertisement -

Latest News

ಮೂಡಲಗಿಯಲ್ಲಿ ಶಾಸಕರ ನೇತೃತ್ವದಲ್ಲಿ ತಿರಂಗಾ ಯಾತ್ರೆ

ಮೂಡಲಗಿ:- ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಹಿನ್ನೆಲೆ ಮೇ,೨೦ ರಂದು ಮಂಗಳವಾರ,ಸಂಜೆ ೪ ಗಂಟೆಗೆ ಮೂಡಲಗಿ ಪಟ್ಟಣದಲ್ಲಿ  ಶಾಸಕರಾದ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ತಿರಂಗಾ ಯಾತ್ರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group