ಸ್ವಚ್ಛತೆಯಿಲ್ಲದ ವಾಯುವ್ಯ ಸಾರಿಗೆ ಲಕ್ಝುರಿ ಬಸ್ಸು

Must Read

ಮೂಡಲಗಿ– ಅಥಣಿಯಿಂದ ಬೆಂಗಳೂರಿಗೆ ಹೋಗುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಝುರಿ ಬಸ್ಸಿನ ಲಗ್ಗೇಜ ಇಡುವ ಸ್ಥಳದಲ್ಲಿ ಗಲೀಜು ತುಂಬಿಕೊಂಡಿದ್ದು ಪ್ರಯಾಣಿಕರ ಲಗ್ಗೇಜುಗಳು ಹೊಲಸಾಗಿವೆ.

ದಿ. ೨೩ ರಂದು ಸಂಜೆ ೭.೩೦  ಕ್ಕೆ  ಮೂಡಲಗಿಗೆ ಬರುವ ಅಥಣಿ – ಬೆಂಗಳೂರು ಲಕ್ಝುರಿ ಬಸ್ ( ನಂ. ಕೆಎ ೨೩ಎಫ್೧೦೧೬) ನಲ್ಲಿ ಇಡಲಾಗಿದ್ದ ಲಗ್ಗೇಜುಗಳು ಬೆಳಿಗ್ಗೆ ನೋಡಿದಾಗ ಅಲ್ಲಲ್ಲಿ ಗ್ರೀಸು ಧೂಳು ಮೆತ್ತಿಕೊಂಡು ಹೊಲಸಾಗಿದ್ದವು. ಇಂಥ ಬ್ಯಾಗ್ ಗಳನ್ನು ತೆಗೆದುಕೊಂಡು ಹೊರದೇಶಕ್ಕೆ ಹೋಗಬೇಕಾದವರು ಹೇಗೆ ಹೋಗಬೇಕು?

ಐಷಾರಾಮಿ ಬಸ್  ಗಳೆಂದರೆ ಸ್ವಚ್ಛತೆಗೆ ಆದ್ಯತೆ ಕೊಟ್ಟಿರಬೇಕಾಗುತ್ತದೆ. ಆದರೆ ವಾಕರಸಾ ಸಂಸ್ಥೆಯ ಈ ಬಸ್ ನಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಒಳ್ಳೆಯ ಸೇವೆಗೆ ಹೆಸರಾಗಿರುವ ರಾಜ್ಯ ಸಾರಿಗೆ ಇಲಾಖೆ ಬಸ್ ಗಳ ಸ್ವಚ್ಛತೆಯ ಕಡೆಗೂ ಗಮನಹರಿಸಬೇಕಾದ ಅಗತ್ಯವಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group