ಸಿಂದಗಿ: ಕರೋನಾ ಆವರಿಸಿ ಆಕ್ಸಿಜನ್ ಕೊರತೆಯಿಂದ ಎಷ್ಟೋ ಸಾವು-ನೋವುಗಳು ಸಂಭವಿಸಿವೆ ಕಾರಣ ಗ್ರಾಮೀಣ ಬಡಜನತೆಗೆ ಅನುಕೂಲವಾಗಲೆಂದು ಹಂದಿಗನೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸನಟ್ರೆಟರ್ ಅನ್ನು ಕೊಡುಗೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಮೇಶ ನರಗುಂದ ಕರೆ ನೀಡಿದರು.
ತಾಲ್ಲೂಕಿನ ಹಂದಿಗನೂರ ಗ್ರಾಮದ ಉಮೇಶ ನರಗುಂದ ಅವರು ತಮ್ಮ ತಾಯಿಯವರ ಸ್ಮರಣಾರ್ಥವಾಗಿ ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸನಟ್ರೆಟರ್ ಅನ್ನು ಕೊಡುಗೆಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ ಮೆಡಿಕಲ್ ಆಫೀಸರ್ ಬಿ ಎನ್ ಕಾಖಂಡಕಿ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಾಯ್ ಎಸ್ ಪಾಟೀಲ್, ಹಾಗೂ ಕೋರವಾರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ಛಾಯಾಗೋಳ ಮತ್ತು ಬಿ ಜೆ ಪಿ ರೈತ ಮೋರ್ಚಾ ಅಧ್ಯಕ್ಷ ಅಶೋಕ ಅಂಚೆಗಾಂವಿ ಹಾಗೂ ಹಂದಿಗನೂರ ಗ್ರಾಮ ಪಂಚಾಯತ್ ಅಧ್ಯಕ್ಷ ಅರವಿಂದ ರಾಠೋಡ, ಉಪಾಧ್ಯಕ್ಷ ಸಿದ್ದಪ್ಪ ಪಟ್ಟಣಶೆಟ್ಟಿ ಹಾಗೂ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಭೀಮಣ್ಣ ನಾಯ್ಕೊಡಿ, ಸದಸ್ಯ ಈರಗಂಟೆಪ್ಪ ಬಿರಾದಾರ, ನಾನಾಗೌಡ ಬಿರಾದಾರ ಹಾಗೂ ಗ್ರಾಮದ ಹಿರಿಯರಾದ ಕೆ ಎಚ್ ಪಾಟೀಲ್, ಶಿವಾನಂದ ವಾಲಿ , ಬಸಲಿಂಗ ನಾಗರಾಳ ರಾಚಪ್ಪ ಹತ್ತಿ , ಮಹೇಶ್ ದೇಸಾಯಿ ಹಾಗೂ ಗ್ರಾಮದ ಹಿರಿಯರು ಇದ್ದರು.