ಕವನ : ಕರಾಳ ದಿನದ ನೆನಪು

Must Read

ಕರಾಳ ದಿನದ ನೆನಪು

ಪುಲ್ವಾಮಾ ದಾಳಿ
ಆತ್ಮಾಹುತಿ ಸ್ಫೋಟದ ಸುಳಿ
ನಲುಗಿದೆ ಭಾರತಾಂಬೆಯ ಸದನ
ಇದೇ ಕಣ್ಣೀರ ಕೋಡಿಯ ವ್ಯಾಖ್ಯಾನ.

ಭಯೋತ್ಪಾದಕರ ಅಟ್ಟಹಾಸ ಭೀಕರ
ಮಾರಣಾಂತಿಕ ಅಪಾರ
ದೇಶದ ಚಿತ್ರಣ ಬದಲಿಸಿ
ವೀರ ಮರಣ ಎಂದೆಂದಿಗೂ ಸ್ಮರಿಸಿ.

ಪ್ರತೀಕಾರದ ಛಾಯೆ
ದಿಗ್ಭ್ರಮೆ ಮೂಡಿಸಿ
ಆಕ್ರಮಣದ ಪರಿಗೆ
ಕಂಪಿಸಿದೆ ಮಣ್ಣ ಕಣ ಕಣ.

ಅಟ್ಟಹಾಸದ ಮೆರವಣಿಗೆ
ಆರದ ಗಾಯ
ಇತಿಹಾಸ ಪುಟದಿ
ಕರಾಳ ದಿನದ ನೆನಪು.

ದುಃಖ ಉಮ್ಮಳಿಸಿದೆ
ಬಿಸಿ ರಕ್ತ ಜಿನುಗುತಿದೆ
ಆಗುಂತಕರ ದಾಳಿಗೆ
ಮರುಗುತಿದೆ ಜನಮನ.

ದೇಶ ಭಕ್ತಿ ಪುಟಿದಿದೆ
ಹರಿದ ರಕ್ತದ ಕೋಡಿಗೆ
ಮಡಿದ ವೀರ ಮರಣಕೆ
ಕಂಪಿಸಿದೆ ಭಾರತ ಮಾತೆ.

ನೆಮ್ಮದಿಯ ನಿದ್ರೆಗೆ
ಸುಖದ ಜೀವನಕೆ
ನಿಮ್ಮದೇ ಬೆಂಗಾವಲು
ವೀರ ಜವಾನರೇ ನಿಮಗಿದೋ ನಮನ.

ರೇಷ್ಮಾ ಕಂದಕೂರ, ಶಿಕ್ಷಕಿ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group