ಕವನ : ನಿನ್ನ ಹೆಸರು ಹೇಳಿ

Must Read

ನಿನ್ನ ಹೆಸರು ಹೇಳಿ

ಬಸವಣ್ಣ
ನಿನ್ನ ಹೆಸರು ಹೇಳಿ
ಮಠ ಪೀಠ ಆಶ್ರಮ
ಕಟ್ಟಿಕೊಂಡರಯ್ಯ
ಕಾವಿಗಳು

ಬಸವಣ್ಣ
ನಿನ್ನ ಹೆಸರು ಹೇಳಿ
ಶಾಸಕ ಮಂತ್ರಿಗಳಾಗಿ
ಕೆಂಪು ಗೂಟದ ಕಾರಿನಲ್ಲಿ
ಮೆರೆಯುವರಯ್ಯ ನಮ್ಮವರು

ಬಸವಣ್ಣ
ನಿನ್ನ ಹೆಸರು ಹೇಳಿ
ಪುಸ್ತಕ ರಚಿಸಿ
ಭಾಷಣ ಮಾಡಿ
ಪ್ರಶಸ್ತಿ ಪಡೆದರಯ್ಯ ಸಾಹಿತಿಗಳು

ಬಸವಣ್ಣ .
ನಿನ್ನ ಹೆಸರು ಹೇಳಿ
ನಿನ್ನ ಮೂರ್ತಿ ನಿಲ್ಲಿಸಿ
ದುಡ್ಡು ಎತ್ತುವರಯ್ಯಾ
ಬಸವ ಉದ್ಯಮಿಗಳು

ಬಸವಣ್ಣ
ನಿನ್ನ ಹೆಸರು ಹೇಳಿ
ಪ್ರಮಾಣ ವಚನ ಸ್ವೀಕರಿಸಿ
ದೇಶ ನಾಡು ಕೊಳ್ಳೆ ಹೊಡೆದರಯ್ಯ
ಎಲ್ಲಾ ಪಕ್ಷದ ಕ್ರಿಮಿಗಳು

ಬಸವಣ್ಣ
ನಿನ್ನ ಹೆಸರು ಹೇಳಿ
ನಿನ್ನ ಚಳುವಳಿ ಸಮಾಧಿ ಮಾಡಲು
ಹೊರಟವರ ಕಂಡು ಮರುಗಿದೆ
ಬಸವ ಪ್ರಿಯ ಶಶಿಕಾಂತ

ಡಾ.ಶಶಿಕಾಂತ ರುದ್ರಪ್ಪ ಪಟ್ಟಣ, ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group