ಕವನ

Must Read

ಗೌರವದ ಪಟ್ಟ

ಅವರು ನನ್ನ
ಕಥೆ ಕವನಗಳ
ಸಹಿಸದಿದ್ದರೆ
ಅದು ದಡ್ಡ
ಸಮಾಜದ ಆಸಹನೆಯ
ಮುಖ್ಯ ಲಕ್ಷಣ
ನಾನು ಸಮುದಾಯವನ್ನು
ವಿವಸ್ತ್ರಗೊಳಿಸುವದಿಲ್ಲ
ಕಾರಣ ಅದು
ಈಗಾಗಲೆ ಬೆತ್ತಲಾಗಿದೆ
ಅದಕ್ಕೆ ಮಾನ ಮುಚ್ಚಲು
ಬಟ್ಟೆ ಹೊಲಿಯುತ್ತಿಲ್ಲ
ಅದು ನನ್ನ ಕಸಬೂ ಅಲ್ಲ
ಅದು ದರ್ಜಿಯ ಕೆಲಸ
ಇಲ್ಲ ವಸ್ತ್ರ ವಿನ್ಯಾಸದವನ
ಚಿಂತೆ ಆಲೋಚನೆ
ಬೆತ್ತಲು ಜಗದಲ್ಲಿ
ನಾನು ಬಟ್ಟೆ ಹಾಕಿರುವೆ
ಅವರು ನನಗೆ
ಹುಚ್ಚ ಎನ್ನುವರು
ಅದು ನನಗೆ ಗೌರವದ ಪಟ್ಟ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

(ಸಾದತ್ ಹಸನ್ ಮಂಟೋ ಅವರ ಗುನುಗುವ
ಮಾತು)

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group