ಕವನ

Must Read

ಗೌರವದ ಪಟ್ಟ

ಅವರು ನನ್ನ
ಕಥೆ ಕವನಗಳ
ಸಹಿಸದಿದ್ದರೆ
ಅದು ದಡ್ಡ
ಸಮಾಜದ ಆಸಹನೆಯ
ಮುಖ್ಯ ಲಕ್ಷಣ
ನಾನು ಸಮುದಾಯವನ್ನು
ವಿವಸ್ತ್ರಗೊಳಿಸುವದಿಲ್ಲ
ಕಾರಣ ಅದು
ಈಗಾಗಲೆ ಬೆತ್ತಲಾಗಿದೆ
ಅದಕ್ಕೆ ಮಾನ ಮುಚ್ಚಲು
ಬಟ್ಟೆ ಹೊಲಿಯುತ್ತಿಲ್ಲ
ಅದು ನನ್ನ ಕಸಬೂ ಅಲ್ಲ
ಅದು ದರ್ಜಿಯ ಕೆಲಸ
ಇಲ್ಲ ವಸ್ತ್ರ ವಿನ್ಯಾಸದವನ
ಚಿಂತೆ ಆಲೋಚನೆ
ಬೆತ್ತಲು ಜಗದಲ್ಲಿ
ನಾನು ಬಟ್ಟೆ ಹಾಕಿರುವೆ
ಅವರು ನನಗೆ
ಹುಚ್ಚ ಎನ್ನುವರು
ಅದು ನನಗೆ ಗೌರವದ ಪಟ್ಟ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

(ಸಾದತ್ ಹಸನ್ ಮಂಟೋ ಅವರ ಗುನುಗುವ
ಮಾತು)

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group