ಕವನ : ಚರಮಗೀತೆ

Must Read

ಚರಮ ಗೀತೆ

ದಮನದ ನೆರಳಿನಲಿ
ನ್ಯಾಯಕ್ಕೆ ಹುಡುಕಾಟ
ಸಾವು ನೋವಿನ ಲೆಕ್ಕ
ಮಸಣ ಮನೆಯು

ದರ್ಪದ ತುಳಿತದಲಿ
ಸತ್ಯಕ್ಕೆ ಹೋರಾಟ
ಶೂಲಕ್ಕೇರುವ ಗೋಣು
ನೂರು ನೂರು

ಹಿರಿಯಣ್ಣ ದೊಡ್ಡಣ್ಣ
ಹೊಸಕಿ ಹಾಕಿದ ದ್ವೀಪ
ಬದುಕು ದುಸ್ತರವಾತು
ಹಗಲಿನಲಿ ಕೈ ಕೊಳವು

ಜಗವಿಂದು ನಲಗುತಿದೆ
ಅಲ್ಲ ದುಷ್ಟರ ದಾಳಿ
ಶಿಷ್ಟರ ಮೌನ ಎಲ್ಲೆಡೆ ಹರಡಿ
ಕಣ್ಣೀರು ಕನಿಕರ ಹಿಂಸೆ ಕೊಲೆಗೆ

ರಾಷ್ಟ್ರ ರಾಷ್ಟ್ರಗಳ ಯುದ್ಧ
ವಾಯು ನೆಲೆ ಕ್ಷಿಪಣಿ ಸದ್ದು
ಸಾಯುತಿದೆ ಜೀವ ಸೆಲೆ
ಮರಣ ಚರಮ ಗೀತೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group