ಕವನ : ನಗೆ ಹುಡುಕಬೇಕು

Must Read

ನಗೆ ಹುಡುಕಬೇಕು

ದುಃಖದ ದೌಲತ್ತಿಗೆ
ನಾನೊಬ್ಬನೆ ಸಿರಿವಂತ
ಎಂದುಕೊಂಡಿದ್ದೆ
ಹತ್ತಿರದಿಂದ ನೋಡಿದರೆ
ಎಲ್ಲರೂ ಧನಿಕರೆ

ಆಗಸದಲಿ ಹಾರುತ್ತ
ಗುಂಪನಗಲಿದ ಗುಬ್ಬಿ
ದುಃಖಿಸದೆ ಮತ್ತೆ
ಗೂಡು ಕಟ್ಟುವುದು ಕಂಡು
ಮೂಕನಾದೆ

ಕಾಲಲ್ಲಿ ಬೂಟಿಲ್ಲ ಎಂದು
ಕಿರುಚಾಡುವ ಬಾಲಕ
ಕಾಲಿಲ್ಲದ ಬಡವ
ಬೀದಿಯಲಿ ಹೂವು
ಮಾರುವುದು ಕಂಡು ಮೌನವಾದ

ಬದುಕು ಇಷ್ಟೇ ನೋವು
ನುಂಗುವವರ ಕಂಡು
ಬಾಳು ಕಾಣಲು ಬೇಕು
ದುಃಖದ ಮಡುವಿನಲಿ
ನಗೆ ಹುಡುಕಬೇಕು
________________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಕಾಂಗ್ರೆಸ್ ಶಾಸಕರ ಮಾತುಗಳು ಹೇಸಿಗೆ ತರಿಸುತ್ತವೆ – ಭಗವಂತ ಖೂಬಾ

ಬೀದರ - ಪ್ರಸಕ್ತ ಮುಖ್ಯಮಂತ್ರಿ ಗಳು, ಮಂತ್ರಿಗಳು, ಶಾಸಕರು ಸದನದಲ್ಲಿ ಆಡುವ ಭಾಷೆ ಹೇಸಿಗೆ ತರುವಂತಿದೆ. ನನ್ನ ರಾಜಕೀಯ ಜೀವನದಲ್ಲಿ ಇಂಥಾ ಭಾಷೆಯನ್ನು ನೋಡಿಲ್ಲ. ಒಬ್ಬ...

More Articles Like This

error: Content is protected !!
Join WhatsApp Group