ಕವನ : ಮಳೆರಾಯ

Must Read

ಮಳೆರಾಯ

ಇಳೆಯನರಸಿ ಬಾರೋ
ಧರೆಯ ಧಗೆಯ ತಣಿಸಿ
ವರ್ಷಧಾರೆ ಎರೆದು
ತಂಪನೆರೆದು ಸಂತೈಸಿ.

ಚಿಗುರಿ ಬೆಳೆದು
ನಗೆಯ ತುಂಬಿ
ಬವಣೆ ನೀಗಿ
ಚೈತನ್ಯ ತುಂಬಿ.

ಬಂಜೆ ಭೂಮಿ ಕಳೆದು
ಮಂದಹಾಸ ಬೀರಿ
ಸಂಕುಲವ ಪೊರೆದು
ವ್ಯಾಕುಲತೆ ಮೀರಿ.

ಹಸಿರ ರಾಶಿ ಹೊತ್ತು
ಹಸಿವ ತೀರಿಸಿ
ಬಲವ ಪೂರೈಸಿ
ಛಲದ ಬದುಕಿಗೆ ನಾಂದಿ ಹಾಡಿ.

ಭರವಸೆ ಕೊಟ್ಟು
ನವ ಚೇತನ ಉತ್ಸವದಿ
ಮುಗಿಲ ಮಲ್ಲಿಗೆ ಕಂಪು ಹರಸಿ
ಹನಿಯ ಚೆಲ್ಲಿದೆ.

ಮೊಳಕೆ ತರಿಸಿ
ಜಲವ ಹರಿಸಿ
ಒಲವ ರಂಗು ತಂದಿದೆ
ಬಾಳ ಬೆಳಕಿಗೆ ಮುನ್ನುಡಿಯಾಗುತ.

ರೇಷ್ಮಾ ಕಂದಕೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group