ಕವನ : ಸ್ನೇಹ

Must Read

ಸ್ನೇಹ

ಸ್ನೇಹ ಇದು ಬರೀ ಪದವಲ್ಲ
ಜೀವನ ಮೌಲ್ಯ ಗಳ ಬೆಸುಗೆ
ಪರಸ್ಪರರ ನಡುವೆ ನಂಬಿಕೆ
ಮೂಡಿ ಬರಲು ಸ್ನೇಹ ಅಮರ

ಕೃಷ್ಣ ಸುಧಾಮರ ಸ್ನೇಹ ಅಜರಾಮರ
ನಿಷ್ಕಲ್ಮಶ ಮನಗಳ ಭಾವ
ಬಡವ ಬಲ್ಲಿದರೆನ್ನದ ಪ್ರೀತಿ
ಆತ್ಮ ಸಂಬಂಧ ಬೆರೆಸಿದ ಭಾವ

ಸ್ನೇಹ ವೆನಲು ಬಂದಿರುವ ಕಷ್ಟ ದೂರಾಗುವುದು
ಜಾತಿ ಮತ ಪಂಥಗಳ ಮೀರಿದ ಬಂಧ
ಬದುಕಿನ ಶ್ರೇಷ್ಠ ಉಡುಗೊರೆ ಸ್ನೇಹ

ಸ್ವಾರ್ಥವಿಲ್ಲದ ಪ್ರೀತಿ ಈ ಸ್ನೇಹ
ದೇಶ ಭಾಷೆ ಎಲ್ಲೆಯ ದಾಟಿ
ಬೆಳೆದ ಭಾವ ಮೀರಿದ ಬಂಧ
ಕಷ್ಟ ಸುಖಗಳ ಸಂಬಂಧ ಈ ಸ್ನೇಹ

ನೋವಿನಲಿ ನಲಿವು ತುಂಬಲು
ದುಃಖದ ಒಡಲಲಿ ಸಾಂತ್ವನ ನೀಡಲು
ನೋವ ಮರೆಸುತ ನಲಿವು
ಹರಸುತ ಜೊತೆಗೂಡುವ ಬಾಂಧವ್ಯ ಈ ಸ್ನೇಹ

ಶ್ರೀಮತಿ ಸುನೀತಾ ಸುರೇಶ ತೇಲಿ
ಚಿದಂಬರ ನಗರ
ಬೆಳಗಾವಿ

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group