ಕವನ : ನಮಾಮಿ ನಾಗದೇವ

Must Read

ನಮಾಮಿ ನಾಗದೇವ

ಅಣ್ಣನ ಕರೆಯದು ಬಂದಿತು ಹಬ್ಬಕೆ
ತಂದಿತು ಮನದಲಿ ಬಗೆಬಗೆ ಬಯಕೆ
ಹೊರಡಲು ಹರುಷದಿ ತಯಾರಿ ನಡೆದಿದೆ
ರಾಯರ ಮುಖವದು ಬಾಡಿಯೇ ಹೋಗಿದೆ//

ತವರಿಗೆ ಹೊರಟಿಹ ಇವಳಿಗದೋ ಸಡಗರ
ಅವನಲಿ ನುಡಿದಿದೆ ವಿರಹದ ಅಪಸ್ವರ
ವಾಹನ ಬಂದಿತದು ಬಾಗಿಲ ಬಳಿಯಲಿ
ಅವನೂ ನಡೆದನು ಮಡದಿಯ ಜೊತೆಯಲಿ//

ಸಂಭ್ರಮದಿಂದ ನಡೆಯಿತು ಮನೆಯಲಿ ಹಬ್ಬ
ಕ್ಷೀರಾಭಿಷೇಕವ ಮಾಡಿಸಿಕೊಂಡನು ನಾಗಪ್ಪಾ
ಸರತಿಯ ಸಾಲಲಿ ಬಂದರು ಎಲ್ಲರೂ
ತನಿಯನು ಎರೆದು ಪಾವನರಾದರು//

ಜೋಕಾಲಿ ಜೀಕುತ ಕೊಬ್ಬರಿ ಲಾಡು ತಿಂದಿಹರು
ನಾನಾ ನೀನಾ ಎನ್ನುತಲಿ ಸ್ಪರ್ಧೆಗೆ ಇಳಿದಿಹರು
ಗೆಲುವಿಗೆ ನಾನಾ ಸಾಹಸವ ಮಾಡಿಹರು
ಗೆದ್ದವರು ಬೀಗುತ ಮುದದಿಂ ಸಾಗಿಹರು//

ಸೋಲು ಗೆಲವು ಜೊತೆ ಜೊತೆಗೆ ಇರಲಿ
ಜೀವನ ನೌಕೆ ಹೀಗೆ ಸಾಗುತಲಿರಲಿ
ತೇಲಿಸು ನೀನು ಹರುಷದ ಕಡಲಲಿ
ಆಸರೆ ನೀಡು ನಿನ್ನಯ ಮಡಿಲಲಿ//

ನಮಾಮಿ ನಮಾಮಿ ನಾಗ ದೇವಗೆ
ಹರಿಹರರ ಪ್ರೀತಿಗೆ ಪಾತ್ರನಾದವಗೆ
ಸಮುದ್ರ ಮಂಥನದ ಪಾತ್ರಧಾರಿಗೆ
ಗಣಪನ ಉದರಕೆ ಆಸರೆಯಾದವಗೆ//

ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ . ಚ ಕಿತ್ತೂರು

Latest News

ರಾಮಾಯಣ ಮಹಾಭಾರತಕ್ಕಿಂತ ಹಳೆಯ ಭಾಷೆ ಕನ್ನಡ – ಬಾಗೇಶ ಮುರಡಿ

ಸಿಂದಗಿ; ಪ್ರಪಂಚದಲ್ಲಿ ೬ ಸಾವಿರ ಭಾಷೆಗಳಿಗೆ ಅದರಲ್ಲಿ ೪ ಸಾವಿರ ಭಾಷೆಗಳಿಗೆ ಲಿಪಿಯಿಲ್ಲ. ಲಿಪಿ ಇರುವ ೨ ಸಾವಿರ ಭಾಷೆಗಳಲ್ಲಿ ಇತಿಹಾಸವನ್ನು ಹೊಂದಿದ ಹಾಗೂ ಮಹಾಭಾರತ,...

More Articles Like This

error: Content is protected !!
Join WhatsApp Group