ಕವನ : ನಮಾಮಿ ನಾಗದೇವ

Must Read

ನಮಾಮಿ ನಾಗದೇವ

ಅಣ್ಣನ ಕರೆಯದು ಬಂದಿತು ಹಬ್ಬಕೆ
ತಂದಿತು ಮನದಲಿ ಬಗೆಬಗೆ ಬಯಕೆ
ಹೊರಡಲು ಹರುಷದಿ ತಯಾರಿ ನಡೆದಿದೆ
ರಾಯರ ಮುಖವದು ಬಾಡಿಯೇ ಹೋಗಿದೆ//

ತವರಿಗೆ ಹೊರಟಿಹ ಇವಳಿಗದೋ ಸಡಗರ
ಅವನಲಿ ನುಡಿದಿದೆ ವಿರಹದ ಅಪಸ್ವರ
ವಾಹನ ಬಂದಿತದು ಬಾಗಿಲ ಬಳಿಯಲಿ
ಅವನೂ ನಡೆದನು ಮಡದಿಯ ಜೊತೆಯಲಿ//

ಸಂಭ್ರಮದಿಂದ ನಡೆಯಿತು ಮನೆಯಲಿ ಹಬ್ಬ
ಕ್ಷೀರಾಭಿಷೇಕವ ಮಾಡಿಸಿಕೊಂಡನು ನಾಗಪ್ಪಾ
ಸರತಿಯ ಸಾಲಲಿ ಬಂದರು ಎಲ್ಲರೂ
ತನಿಯನು ಎರೆದು ಪಾವನರಾದರು//

ಜೋಕಾಲಿ ಜೀಕುತ ಕೊಬ್ಬರಿ ಲಾಡು ತಿಂದಿಹರು
ನಾನಾ ನೀನಾ ಎನ್ನುತಲಿ ಸ್ಪರ್ಧೆಗೆ ಇಳಿದಿಹರು
ಗೆಲುವಿಗೆ ನಾನಾ ಸಾಹಸವ ಮಾಡಿಹರು
ಗೆದ್ದವರು ಬೀಗುತ ಮುದದಿಂ ಸಾಗಿಹರು//

ಸೋಲು ಗೆಲವು ಜೊತೆ ಜೊತೆಗೆ ಇರಲಿ
ಜೀವನ ನೌಕೆ ಹೀಗೆ ಸಾಗುತಲಿರಲಿ
ತೇಲಿಸು ನೀನು ಹರುಷದ ಕಡಲಲಿ
ಆಸರೆ ನೀಡು ನಿನ್ನಯ ಮಡಿಲಲಿ//

ನಮಾಮಿ ನಮಾಮಿ ನಾಗ ದೇವಗೆ
ಹರಿಹರರ ಪ್ರೀತಿಗೆ ಪಾತ್ರನಾದವಗೆ
ಸಮುದ್ರ ಮಂಥನದ ಪಾತ್ರಧಾರಿಗೆ
ಗಣಪನ ಉದರಕೆ ಆಸರೆಯಾದವಗೆ//

ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ . ಚ ಕಿತ್ತೂರು

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group