ಕವನ : ಊಸರವಳ್ಳಿಯ ಆತ್ಮಹತ್ಯೆ

Must Read

ಊಸರವಳ್ಳಿ ಆತ್ಮಹತ್ಯೆ

ಕಾಡಿನಲ್ಲಿ
ಒಂಟಿ ಬದುಕು
ಹೊಟ್ಟೆಗಾಗಿ
ಬಣ್ಣ ಬದಲಿಸುತ್ತಿತ್ತು
ನಿರುಪದ್ರವ ಜೀವಿ
ಊಸರವಳ್ಳಿ
ಶ್ರೀಗಂಧ ಕಳ್ಳರು
ಕಾಡಿಗೆ ಬೆಂಕಿ
ಗಣಿ ಲೂಟಿ
ಮರಳು ದಂಧೆ
ಹುಲಿ ಚರ್ಮ ಆನೆ ಕೊಂಬಿನ
ಭರ್ಜರಿ ಮಾರಾಟ
ಕೆರೆ ಹಳ್ಳ ನದಿ ಅತಿಕ್ರಮಣ
ಲೋಕಾಯುಕ್ತದಿಂದ
ಎಸ ಆಯ್ ಟಿ ಯಿಂದ
ಕ್ಲೀನ್ ಚಿಟ್ ಪ್ರಾಮಾಣಿಕರು
ಚುನಾವಣಾ ಬಂದಾಗ
ಶ್ವೇತ ಶುಭ್ರ ಖಾದಿ ಜುಬ್ಬ
ಬುದ್ಧ ಬಸವ ಗಾಂಧಿ ಹಬ್ಬ
ಸಂವಿಧಾನ ಹೆಸರಲ್ಲಿ
ಮಂತ್ರಿಯಾಗಿ ಪ್ರಮಾಣ ವಚನ
ಬೇಸರಗೊಂಡಿತು ಊಸರವಳ್ಳಿ
ಒಂದು ದಿನ ಬೆಳ್ಳಂಬೆಳಿಗ್ಗೆ
ಮರಕ್ಕೆ ಹಗ್ಗ ಬಿಗಿದು
ಆತ್ಮಹತ್ಯೆ ಮಾಡಿಕೊಂಡಿತ್ತು .
ಕೈಯಲ್ಲಿ ಏನೋ ಒಂದು ಚೀಟಿ
ತೆಗೆದು ನೋಡಿದರೆ
ದುಷ್ಟ ರಾಜಕಾರಣಿಗಳೇ
ನಿಮ್ಮಷ್ಟು ನನಗೆ ಬರಲಿಲ್ಲ
ಬಣ್ಣ ಬದಲಾಯಿಸಲು
ನನ್ನ ಸಾವಿಗೆ ನಾನೇ ಕಾರಣ
ಓದಿದ ನಾವು ನಗಬೇಕೋ
ಇಲ್ಲ ಅಳಬೇಕೊ ?
ಗೊತ್ತಾಗಲೊಲ್ಲದು

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group