ಕವನ : ಅನಾಥರ ನಾಥ

Must Read

ಅನಾಥರ ನಾಥ

ಅಬಲ ಅಶಕ್ತ
ಅಸ್ಪ್ರಶ್ಯ ಅನಾಥ
ಅನಾಥರ ನಾಥ
ಸಂಗಮನಾಥ
ಹೇ ಬಸವೇಶ್ವರ
ಒಳಗೊಳಗೆ ಬೆಂದ
ಶತಮಾನದ ಅಸಮತೆ
ಜಾತಿ ವರ್ಗ ವರ್ಣ
ಕಿತ್ತೆಸೆದೆ ವೀರ
ಶಾಂತಿ ಪ್ರೀತಿಗೆ
ಜೀವ ತೇಯ್ದ ಯೋಧ
ಕೊನೆಗೊಳಿಸಿದೆ
ಸನಾತನಿಗಳ ವಾದ
ಇಲ್ಲವಾದವು
ವೇದ ಆಗಮ ಪುರಾಣ
ಶಾಸ್ತ್ರ ಶಕುನ ಮುಹೂರ್ತವು
ಅಕ್ಷರ ಕಲಿಸಿ
ವಚನ ರಚಿಸಿ
ಬಟ್ಟೆಯಾದಿ ದೇವಲೋಕಕೆ
ಶ್ರಮದ ಬೆವರೆ
ಪುಣ್ಯ ತೀರ್ಥ
ಹಂಚಿ ತಿಂದರೆ ಸ್ವರ್ಗವು
ಕಟ್ಟಿಕೊಟ್ಟೆ ಮುಕ್ತ ಸಮಾಜವ
ನಾವು ಬದುಕಲಾರದ ಹೇಡಿಯು
ನಿನ್ನ ಸ್ಮರಣೆ ನಿತ್ಯ ಮಂತ್ರ
ಲಿಂಗವಂತ ಸ್ವತಂತ್ರರು..
ಸತ್ಯ ಹಾದಿ ಹುಡಕಲಿರುವ
ಬಸವ ಭಕ್ತರು ಶ್ರೇಷ್ಠರು.
————————————–
ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ

Latest News

ಲೇಖನ : ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರ

ಬ್ರಾಹ್ಮಣ ಪುತ್ರನಿಗಾಗಿ ಕೊಲೆಗಾರನಾದ ಶ್ರೀರಾಮಚಂದ್ರಾಮ ಚರಿತ ಕಥಾಮೃತವಾದ ರಾಮಾಯಣ, ಶ್ರೀರಾಮನನ್ನು ಮರ್ಯಾದ ಪುರುಷೋತ್ತಮ ಎಂದು ಬಿಂಬಿಸಿದೆ. ಹಾಗೆಂದ್ರೆ ತನ್ನ ಜೀವಮಾನದಲ್ಲಿ ನೀತಿ ಹಾಗೂ ತತ್ವ ಬದ್ಧವಾಗಿ...

More Articles Like This

error: Content is protected !!
Join WhatsApp Group