ನನ್ನಪ್ಪ
ಉಸಿರ ನೀಡಿ
ಬೆವರ ಬಸಿದು
ಬೆಚ್ಚಗಿನ ಸೂರಲಿ
ಪೊರೆದ ಜೀವ.
ನೋವ ನುಂಗಿ
ನಲಿವ ಹಂಚಿ
ಬಾನಂಚಿನ ತಾರೆ
ಇರುಳಲೂ ಮಿನುಗುತ.
ವಾತ್ಸಲ್ಯ ತೋರಿ
ತಲ್ಲಣವ ದೂರಿಕರಿಸಿ
ತನ್ನದಲ್ಲದ ಬದುಕಿಗೆ
ತೇಯ್ದ ಗಂಧ.
ತಾನು ಹಸಿದು
ತನ್ನವರ ಹೊಟ್ಟೆ ತುಂಬಿಸಿ
ಮಾಸಿದ ಬಟ್ಟೆಯಲೂ
ದಿಟ್ಟ ನಿರ್ಧಾರ ಕೈಗೊಳ್ಳುವ.
ಛಲವ ಹೊತ್ತು ಸಾಗಿ
ಒಲವ ಬಲವ ತುಂಬಿ
ಬಾಳ ಬಂಡಿಗೆ ನೊಗವೇ ಆಗಿ
ತಾಳ ಮೇಳ ಸೇರಿಸುತ.
ಆಲದ ಮರದ ಬೇರು
ನೆಲೆಗಾಗಿ ಹೋರಾಟ
ತನ್ನದೆಲ್ಲ ಕಡೆಗಣಿಸಿ
ಮುಂದಡಿಗೆ ಪ್ರೇರಣೆ.
ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು