ಗಾದೆ ಮಾತುಗಳ ಹೊಂದಿಸಿ ಕವನ ರಚನೆ

Must Read

ಗಾದೆ ವೇದಕ್ಕೆ ಸಮಾನ

ಆಳಾಗಿ ದುಡಿಯುವವ ಅರಸನಾಗಬಲ್ಲ
ನುಡಿದಂತೆ ನಡೆಯುವವ ಜಗ ಆಳಬಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲವಲ್ಲ
ಎಂದರಿತು ಬಾಳಿದವನಿಗೆ ಸೋಲಿಲ್ಲ//

ಕುಂತುಂಡರೆ ಕುಡಿಕೆ ಹೊನ್ನು ಸಾಲದಲ್ಲ
ಮಾಡಿದ್ದು ಉಣ್ಣದೆ ಯಾರಿಗೂ ಗತಿಇಲ್ಲ
ಉಪ್ಪು ತಿಂದವ ನೀರು ಕುಡಿಯಬೇಕಲ್ಲ
ಇದನ್ನೆಲ್ಲಾ ಅರಿತವ ಜಗದಿ ಬದುಕಬಲ್ಲ//

ಮನಸ್ಸಿದ್ದರೆ ಮಾರ್ಗ ಉಂಟು ತಿಳಿಯಬೇಕಲ್ಲ
ಹುಟ್ಟಿದವನು ಸಾಯಲೇಬೇಕೆಂಬುದು ಸುಳ್ಳಲ್ಲ
ಕುಡುಗೋಲುನುಂಗಿರೋನೊಟ್ಟೆ ಹರಿಯಬೇಕಲ್ಲ
ಇದನ್ನರಿತು ಬಾಳಿದರೆ ಸುಂದರ ಬದುಕೆಲ್ಲ//

ಮಾತು ಬೆಳ್ಳಿ ಮೌನ ಬಂಗಾರ ನಿಜವಹುದಲ್ಲ
ಉಪ್ಪಿಗಿಂತ ಬೇರೆನು ರುಚಿ ಜಗದಿ ಇಲ್ಲವಲ್ಲ
ತಾಯಿಗಿಂತ ದೊಡ್ಡ ಬಂಧು ಸಿಗುವುದಿಲ್ಲ
ಅರಿತು ನಡೆದೊಡೆ ದೇವರು ಬಳಿ ಇಹನಲ್ಲ//

ದುಡಿಮೆಯೇ ದುಡ್ಡಿನ ತಾಯಿ ಬಲ್ಲವಗೆಲ್ಲ
ಮಾತು ಬಲ್ಲವನಿಗೆಂದೂ ಜಗಳವಿಲ್ಲವಲ್ಲ
ಊಟಬಲ್ಲವನಿಗೆ ರೋಗ ಸುಳಿಯದಲ್ಲ
ಗಾದೆಗಳು ವೇದಗಳಿಗೆ ಸಮನಾಗಿವೆಯಲ್ಲ//

ಅನ್ನಪೂರ್ಣ ಹಿರೇಮಠ ಶಿಕ್ಷಕಿ,ಬೆಳಗಾವಿ

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group