- Advertisement -
ಹುಟ್ಟಿ ಬನ್ನಿ
ಹುಟ್ಟಿ ಬನ್ನಿ
ವೀರ ಯೋಧರೇ
ಕನ್ನಡವ ಕಟ್ಟಿ
ಸತ್ಯ ಸಮತೆ
ಶಾಂತಿ ಪ್ರೀತಿ
ಜಗಕೆ ಭಾಷೆ
ಬರೆಯ ಬನ್ನಿ
ಗಡಿಯಲ್ಲಿ ತಂಟೆ
ಜಗಳ ಕದನಕೆ
ದಿಟ್ಟ ಉತ್ತರ
ನೀಡ ಬನ್ನಿ
ಹೆಸರಾದ ಕನ್ನಡಕೆ
ಗುಡಿ ಕಳಶ
ಕಟ್ಟ ಬನ್ನಿ
ಅಕ್ಕರೆಯ ಅಕ್ಷರಗಳ
ನಿತ್ಯ ನೀವು
ಕಲಿಸ ಬನ್ನಿ
ಮರೆತು ಹೋಗುವ
ಕನ್ನಡಕೆ ಅಗ್ರ
ಪಟ್ಟ ಕಟ್ಟ ಬನ್ನಿ
ಕಾವೇರಿ ಗೋದಾವರಿ
ಕೃಷ್ಣೆ ತುಂಗೆ
ಮಲಪ್ರಭೆ ಮರಳಿ ಹರಿಸಿ
ಕನ್ನಡವ ಗೆಲಿಸ ಬನ್ನಿ
ಬನ್ನಿ ಬನ್ನಿ
ವೀರ ಯೋಧರೇ
ಕನ್ನಡವ ಕಟ್ಟ ಬನ್ನಿ
————————————–
ಪ್ರೀತಿಯೆಂದರೆ
ಪ್ರೀತಿಯೆಂದರೆ
ಅದು ಬರಿ ಶಬ್ದವಲ್ಲ
ಭಾವ ಹಸುರಿನ ತೋರಣ
ನೊಂದ ಮನಕೆ
ಮುದವ ನೀಡುವ
ಸ್ನೇಹ ಕರುಣೆ ಕಾರಣ
- Advertisement -
ಪ್ರೀತಿಯೆಂದರೆ
ಕವನ ಕಾವ್ಯವಲ್ಲ
ಗುಡ್ಡ ಬೆಟ್ಟದ ಚಾರಣ
ನೋವ ಮರೆಸಿ
ನಗೆಯ ಬೀರುವ
ಹೃದಯ ಭಾಷೆಯ ಹೂರಣ
ಪ್ರೀತಿಯೆಂದರೆ
ಮಳಿಗೆ ಸಂತೆಯಲ್ಲ
ತನು ಮನ ಧಾರಣ
ಹೊಸ ಭರವಸೆ
ಹೊಸ ಕನಸಿಗೆ
ಪ್ರೀತಿಯೊಂದೆ ಪ್ರೇರಣಾ
—————————
ಡಾ. ಶಶಿಕಾಂತ ಪಟ್ಟಣ ರಾಮದುರ್ಗ