ಕವನ: ಮತ್ತೆ ಹುಟ್ಟಿ ಬನ್ನಿ

Must Read

ಮತ್ತೆ ಹುಟ್ಟಿ ಬನ್ನಿ

ದಿಟ್ಟೆದೆ ತೋರುತ ಆದರ್ಶವಾಗಿ ಜಗದೆಲ್ಲೆಡೆ

ವಿವೇಕ ಮೆರೆದೆ

ತಟ್ಟುತ ತರುಣರ ಹೃದಯವ ಜಾಗೃತಗೊಳಿಸಿ 

ಮೌಲ್ಯವ ಎರೆದೆ

ಅಟ್ಟುತ ದೂರಕೆ ಆಲಸ್ಯವ ಮೈಕೊಡವಿ

ಬನ್ನಿರೆಂದಿರಲ್ಲವೇ

ಮೆಟ್ಟುತ ಚಿಕ್ಯಾಗೋ ನೆಲವ ಭಾಷಣದೊಳು

ಎಲ್ಲರ ಕಣ್ ತೆರೆದೆ

ವೀರ ಸನ್ಯಾಸಿಯೇ ದೇಶವಿದೇಶಗಳ ತುಂಬೆಲ್ಲ

ಪ್ರಖ್ಯಾತಿ ಪಡೆದಿರಿ

ಸಾರುವ ಘೋಷವಾಕ್ಯ ಮನ ಪರಿವರ್ತಿಸಿ

ಸಂಸ್ಕೃತಿ ಪೊರೆದೆ

ವ್ಯಕ್ತಿತ್ವ ವಿಕಸನಕೆ ದಿವ್ಯೌಷಧಿ ನಿಮ್ಮ ನುಡಿ

ಓರೆಕೋರೆಯ ತಿದ್ದುವಲ್ಲಿ

ಶಕ್ತಿ ಪ್ರವೇಶ ಕಾಯದಿ ಸ್ವಾಮಿ ವಿವೇಕಾನಂದ

ಎಂದು ಹೆಸರು ಕರೆದೆ

ಕರಕಮಲ ಜೋಡಿಸಿ ಶಿರಬಾಗುವೆನಿಂದು 

ತಮ್ಮ ಜಯಂತಿಯ ಆಚರಿಸಿ

ಮರಳಿ ಮತ್ತೆ ಹುಟ್ಟಿ ಬನ್ನಿರೆಂಬ  ಹಂಬಲವ ಗಝಲ್ ಮೂಲಕ ಬರೆದೆ.


ಶ್ರೀಮತಿ ಕಮಲಾಕ್ಷಿ ಕೌಜಲಗಿ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group