ಕ್ರಾಂತಿ ಕಿಡಿ ಭಗತ್ ಸಿಂಗ್
ಮತ್ತೊಮ್ಮೆ ಜಗದಿ ಹುಟ್ಟಿ ಬರಲಿ
ಭಾರತಾಂಬೆಯ ಕರುಳ ಬಳ್ಳಿಯಲಿ
ಕ್ರಾಂತಿಯ ಕಿಡಿ ಎಲ್ಲೆಡೆ ಹರಡಲಿ
ಎಲ್ಲ ಯುವಕ ಯುವತಿಯರಲಿ
ಯುವ ಜನತೆ ಮರೆತು ಹೋಗಿದೆ
ತಮ್ಮೊಳಗಿರುವ ಶಕ್ತಿಯ ಮಹಿಮೆ
ಅಹಿತಕರ ಕೆಲಸದಿ ಮುಳುಗಿಹರು
ಸಿಂಹ ಶಕ್ತಿ ಹೊಂದಿದ ಕಲಿಗಳು
ನೀ ಬಂದೊಮ್ಮೆ ದಾರಿ ತೋರು
ತಿಳಿಸೊಮ್ಮೆ ಅವರ ಕರ್ಮವನು
ಭಾರತಮಾತೆಯು ಕೊರಗುತಿಹಳು
ತನ್ನ ಸಂತಾನದ ಸ್ಥಿತಿಯನು ಕಂಡು
ನಮಿಸುವೆ ಭಗವಂತ ನಿನಗೆ
ಕಳಿಸಿಕೊಡು ರುದ್ರನರೂಪದಿ
ಕಾಯುತಿಹಳು ಭುವನೇಶ್ವರಿ
ಕ್ರಾಂತಿ ಕಿಡಿಯ ಬರುವಿಕೆಗಾಗಿ
ರಚನೆ ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚ ಕಿತ್ತೂರು