spot_img
spot_img

ಕವನ: ಬೆಂಕಿ ಇಲ್ದಾ ಹೊಗೆ ಯಂಗಾತು

Must Read

- Advertisement -

ಬೆಂಕಿ ಇಲ್ದಾ ಹೊಗೆ ಯಂಗಾತು

ನಾ ಹೇಳಿನಂತ

ಹೇಳ್ಬೇಡ ಯಾರಿಗೂನು-?

ಬಿರುಗಾಳಿನ ಕರಿಸಿ

- Advertisement -

ನಮಗss ನಾವ ತೂರಿ ಹೋಗಿವಿ

ನಮ್ ಕೇರಿ ಗುಡಿಸಲೊಳಗsss

ಕಿಚ್ಚಿನ ಮ್ಯಾಲ

- Advertisement -

ಬೆಚ್ಚಗ ಮಲಿಗೆದ್ದು

ತಾಂಬೂಲ ಜಗಿದು

ಝರಿಯಾಗಿ ಹರಿದು

ರತಿ ತೇವ ಮೇಯ್ದು

ಸದ್ದಿಲ್ದಂಗsss ಅವ್ರು-

ಹೊರಗ ಬರಾ ಹೊತ್ತಿನಗss

ನಾವು –

ಎಚ್ಚರ ಇದ್ರುನೂ ನಿದ್ದಿ ಮಾಡುತ್ತಿದ್ದಂಗ ಇರ್ತೀವಿss

ನಾ ಹೇಳಿನಂತ

ಹೇಳ್ಬೇಡ ಯಾರಿಗೂನು?

ಪಾಪಸ್ ಕಳ್ಳಿ ಮುಳ್ಳಿನ

ಅಳುಕಿಗೆ ಸತ್ಗಿತ್ತಬಿಟ್ಟೇವು

ನಾವು ಹುಚ್ಚರಂಗss

ಅರಿವು-ಇರಿವು

ಮರೆತುಬಿಟ್ಟೀವಿ sss

ನಮಗನೂ ಕ್ವಾಪ ಬರ್ತದsss

ಬುಸುಗುಡುತ ಚಿತ್ತ

ಅವ್ರು ಕುತಗಿ ಕೊಳವಿ

ಕಡುಕಂದು ತಿಂದ್ ಬಿಡಾಣ

ಅನಿಸ್ತದ ಮತ್ಸರದ ಮತ್ತss

ಏನ್ ಮಾಡತಿ….?

ನಮ್ ಜನರ ಕೈ-ಬಾಯಿಗೆ

ಮುಸುರಿ ಎಂಜಲಿರುತೈತಿ!

ನಾ ಹೇಳಿನಂತ

ಹೇಳ್ಬೇಡ ಯಾರಿಗೂನು?

ನಮ್ ಕಳ್ಳುಬಳ್ಳಿನೆ ತಾಯ್ಗಂಡರು

ಗುಪ್ತ ಒಪ್ಪಂದದ ಮ್ಯಾಲ

ತಾವಾ ಒತ್ತೆ ಬಿದ್ದಾರsss

ಓಣಿ ಹೆಂಗಸ್ರು

ಒಂದೀಟ ನಕ್ಕಬಿಟ್ರss

ಅವ್ರು ಗುಂಗು

ಸುಂಟರ ಗಾಳ್ಯಾಗಿ ಸುತ್ತತದsss

ಮೈನಗss ಮನಸಿನಗ ss

ಬೆಸಿತದ ಹಸಿವು

ಕಂಗಳ ಅಂಗಳದಗ ವಿರಹ

ಸುಡಾಗ್ನಿ ಕುರುಹಾಗ್ತೈತಿ

ನಾ ಹೇಳಿನಂತ

ಹೇಳ್ಬೇಡ ಯಾರಿಗೂನು?

ನಗು ನಗುತಾ ಎದೆ ಬಗದು

ಗಾಸಿ ಮಾಡಾ ನಮ್ ನೆರಳು

ಬೆಂಕಿಯಿಲ್ದಾ ಹೊಗೆ ಯಂಗಾಗ್ತಾದ!

ನಮ್ತಾವsss ಬಲವಿಲ್ಲ

ಬದುಕಕಾsss ನೆಲವಿಲ್ಲ

ಅವ್ರ-

ಹಾವಭಾವಕss ಅಣಿಯಾಗಿ

ದೀಪಕ ಸುತ್ತಾ ಹುಳ

ಉರುದು ಬಿದ್ದಂಗsss

ಸಂಜಿಯಾತಂದ್ರ sss

ಇಳಿಗಣ್ಣ ಹೋದಂಗ

ಅಂಜಿಕೆಯಾಗುತೈತಿ!


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

- Advertisement -

1 COMMENT

Comments are closed.

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group