Homeಕವನಕವನ: ಶ್ರೀ ರಾಮಚಂದ್ರ

ಕವನ: ಶ್ರೀ ರಾಮಚಂದ್ರ

ಶ್ರೀ ರಾಮಚಂದ್ರರ ಆಗಮೋತ್ಸವದ ಅಂಗವಾಗಿ

ದಶರಥ ನಂದನ ಶ್ರೀ ರಾಮರ ಚರಣಾರವಿಂದಕ್ಕೆ

ಶರಷಟ್ಪದಿ ಪದ ಕುಸುಮದರ್ಪಣೆ  

🌹🌹🌹🌹🌹🌹🌹🌹🌹🌹🌹

ರಾಮನ ಒಲುಮೆಯ

ನಾಮದ ಜಪದಲಿ 

ಎಮ್ಮಘವಕಳೆದು ಪಾವನ ಪ/

ರಮದಲಿ  ಶಾಂತಿಯ

ಸುಮ್ಮನೆ  ಮತಿಯಲಿ 

ಜುಮ್ಮನೆ ಕಾಣುವೆ ಕಾಂತಿಯನು /

ಮೂರೆರಡು ಶತಕ

ಬಾರಿಸಿತು ಜಯವ

ಮರೆಸುತ ಕಲುಷವ ಬಾಳಿನಲೀ /

ಹರಿಸುತ ತಿಳಿಸುತ 

ಸಾರುತ ಜಗದೊಳು

ಹರುಷದಿ ಇಹಪರ ಸುಖದಲೀ/

ನೀತಿಯ ರೂಪವ

ರೀತಿಯ ಭಾವವ

ಸಂತತ ಜಪಿಸೋ ರಾಮರಾ /

ಅಂತಕರಣದೊಳು

ಕಂತೆಗಳಕಳೆದು

 ಶಾಂತಿಯ ಪ್ರಿಯಕೃಷ್ಣ  ನಾ /


ಪ್ರಿಯಾ ಪ್ರಾಣೇಶ ಹರಿದಾಸ. ವಿಜಯಪುರ

RELATED ARTICLES

Most Popular

error: Content is protected !!
Join WhatsApp Group